ಮುನಿಶ್ರೀ ಮಂಗಳ ಪ್ರವೇಶ; ಭಕ್ತರಿಂದ ಪುಷ್ಪವೃಷ್ಟಿ

ತುಮಕೂರು: ನಗರದ ಚಿಕ್ಕಪೇಟೆಯ ಯುಗಳ ಮುನಿಗಳ ಚಾತುರ್ಮಾಸ ಸಮಿತಿ ನೇತೃತ್ವದಲ್ಲಿ ಭಾನುವಾರ ಮುನಿಶ್ರೀಗಳ ಮಂಗಳ ಪುರ ಪ್ರವೇಶ ಕಾರ್ಯಕ್ರಮ ನಡೆಯಿತು. ಜೈನ ಭವನದಿಂದ ಚಿಕ್ಕಪೇಟೆಯ ಜಿನ ಮಂದಿರದವರೆಗೆ ಮೆರವಣಿಗೆ ನಡೆಯಿತು.
ಬಿ.ಎಚ್.ರಸ್ತೆಯ ಜೈನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ನರಸಿಂಹರಾಜಪುರದ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಮಂಡ್ಯ ಜಿಲ್ಲೆ ಆರತಿಪುರ ಜೈನಮಠದ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರಿಗೆ ಭಕ್ತರು ಪುಷ್ಪವೃಷ್ಟಿ ನೆರವೇರಿಸಿ, ಫಲಪುಷ್ಪ ನೀಡಿ ಗೌರವ ಸಲ್ಲಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜೈನ ಸಮಾಜದ ಮುಖಂಡರಾದ ಸುರೇಂದ್ರಕುಮಾರ್ ಹೆಗ್ಗಡೆ, ಅನಿತಾ ಸುರೇಂದ್ರಕುಮಾರ್ ಹೆಗ್ಗಡೆ, ತುಮಕೂರು ಜೈನ್ ಸಮಾಜದ ಮಾಜಿ ಅಧ್ಯಕ್ಷರಾದ ಸನ್ಮತಿಕುಮಾರ್, ಅಧ್ಯಕ್ಷರಾದ ಟಿ.ಎನ್.ಅಜಿತ್, ಬಾಹುಬಲಿಬಾಬು, ವಿಜಯಕುಮಾರ್, ಎಸ್.ವಿ.ಜಿನೇಶ್, ಸುಬೋಧ್ಕುಮಾರ್ ಜೈನ್, ಬಿ.ಎಸ್. ಪಾರ್ಶ್ವನಾಥ್, ಕೆ.ಪಿ.ವೀರೇಂದ್ರ ಸೇರಿದಂತೆ ಜೈನ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.