ರೈತಾಪಿ ಕುಟುಂಬದವರಾದ ಅಳ್ಳೆನಹಳ್ಳಿ ಗೀತಾ ಹಾಗೂ ಯಲಚಿಹಳ್ಳಿಯ ಯೋಗೀಶ್ ತಮ್ಮ ಜಮೀನಿನಲ್ಲಿ ಅಪರೂಪದ ಜಾತಿಯ ಗಿಡಮರಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಗ್ರಾಮದ ಸುತ್ತ ಮುತ್ತ, ರಸ್ತೆ ಬದಿ ಹಾಗೂ ಶಾಲೆಗಳ ಆವರಣಗಳಲ್ಲಿ ಉರುಗಲು, ಕಮರ, ನವಿಲಾಡಿ, ಬಿಳಿಸುರುಗ ಮುಂತಾದ ವಿಶಿಷ್ಟ ಜಾತಿಯ ಮರಗಳ ಪೋಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಹಾಗೂ ಕೆರೆ ಅಂಗಳದಲ್ಲಿ ಅರಣ್ಯ ಇಲಾಖೆ ನೆಟ್ಟು ಪೋಷಿಸದೆ ಬಿಟ್ಟಿರುವ ಸಸಿಗಳನ್ನು ಇವರು ಪೋಷಿಸುತ್ತಿದ್ದಾರೆ.