ತುಮಕೂರು: ಸಂವಿಧಾನದ ಪ್ರಕಾರ ಸಮಾಜದ ಎಲ್ಲರಿಗೂ ಸಮಾನ ಅವಕಾಶಗಳು, ಹಕ್ಕುಗಳು ಇವೆ. ಹೀಗಿದ್ದರೂ ಹೆಣ್ಣು-ಗಂಡು ಎನ್ನುವ ಅಸಮಾನತೆ, ತಾರತಮ್ಯ ಇಂದಿಗೂ ಜೀವಂತವಾಗಿದೆ. ಈ ಅಸಮಾನತೆ ತೊಡೆಯಲು ಹೆಣ್ಣು ಮಕ್ಕಳಿಗೆ ಪೋಷಕರು ಶಿಕ್ಷಣ ಕೊಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ಸಲಹೆ ನೀಡಿದರು.