<p>ಚಿಕ್ಕನಾಯಕನಹಳ್ಳಿ: ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಿ, ಈ ವರ್ಷದ ಜುಲೈ ಅಂತ್ಯದೊಳಗೆ ತುಮಕೂರು ಜಿಲ್ಲೆಗೆ ನೀರು ತರುವ ಗುರಿ ಇದೆ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಹೇಳಿದರು.</p>.<p>ತಾಲ್ಲೂಕಿನ ಗೋಡೆಕೆರೆ ತಪೋವನದಲ್ಲಿ ಭಾನುವಾರ ನಡೆದ ಜಗದ್ಗುರು ಮೃತ್ಯುಂಜಯ ದೇಶಿ ಕೇಂದ್ರ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ತಾಲ್ಲೂಕಿನ ಕೆರೆಗಳು ಭರ್ತಿಯಾದಲ್ಲಿ ಈ ಭಾಗದ ಜನಜೀವನಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ನೀರಾವರಿ ಸೌಲಭ್ಯ ತಾಲ್ಲೂಕಿನ ಪ್ರಗತಿಗೆ ಅತಿ ಮುಖ್ಯವಾಗಿರುವುದರಿಂದ ಹೇಮಾವತಿ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಎಂದರು.</p>.<p>ಗೋಡೆಕೆರೆ ಮಠದ ಗುರು ಸಿದ್ದರಾಮೇಶ್ವರ ಗೋಪುರ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ₹4 ಕೋಟಿ ಬಿಡುಗಡೆ ಮಾಡಿದೆ. ಮಠದಿಂದ ಸಲ್ಲಿಕೆಯಾಗಿರುವ ಹೆಚ್ಚುವರಿ ₹5 ಕೋಟಿ ಬೇಡಿಕೆಯನ್ನು ಮುಖ್ಯಮಂತ್ರಿ ಗಮನಕ್ಕೆ ತಂದು, ಶೀಘ್ರದಲ್ಲೇ ಅನುಮೋದನೆ ದೊರಕಿಸಿಕೊಡಲಾಗುವುದು ಎಂದು ಹೇಳಿದರು.</p>.<p>ಕೆರಗೋಡಿ ರಂಗಾಪುರ ಮಠದ ಗುರು ಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಗಳು ದಶಕಗಳಿಂದ ಗೋಡೆಕೆರೆ ಕ್ಷೇತ್ರದಲ್ಲಿ ಚರಪಟ್ಟಾಧ್ಯಕ್ಷರಾಗಿ ಕಾಯಕವೇ ಕೈಲಾಸ ತತ್ವದಡಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.</p>.<p>ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಮಾತನಾಡಿ, ನುಡಿದಂತೆ ನಡೆಯುವ ವ್ಯಕ್ತಿತ್ವದ ಗೋಡೆಕೆರೆ ಸ್ವಾಮೀಜಿ ಕಾಯಕನಿಷ್ಠೆಯಿಂದಾಗಿ ಈ ಮಠಕ್ಕೆ ಅಪಾರ ಸಂಖ್ಯೆಯ ಭಕ್ತವೃಂದವಿದೆ. ದಿನದ ಪ್ರತಿ ಕ್ಷಣವನ್ನೂ ಕಾಯಕದಲ್ಲಿಯೇ ಕಳೆಯುವ ಇವರ ಜೀವನಶೈಲಿ ಎಲ್ಲರಿಗೂ ಮಾದರಿ. ಮಠಮಾನ್ಯಗಳ ಮಾರ್ಗದರ್ಶನದಲ್ಲಿ ನಡೆಯುವ ವ್ಯಕ್ತಿಯು ಜೀವನದಲ್ಲಿ ತನ್ನ ಗುರಿಯನ್ನು ಯಶಸ್ವಿಯಾಗಿ ತಲುಪಬಲ್ಲ ಎಂದರು.</p>.<p>ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಮಠಗಳು ಕೇವಲ ಧರ್ಮದ ಸಂಕೇತಗಳಲ್ಲ, ಅವು ದಾಸೋಹ ಮತ್ತು ಜ್ಞಾನದ ಪವಿತ್ರ ಕೇಂದ್ರಗಳಾಗಿವೆ. ಲಿಂಗಾಯತ ಸಮಾಜದ ಮಠಗಳೆಂದರೆ ದಾಸೋಹಕ್ಕೆ ಪರ್ಯಾಯ ಪದಗಳಿದ್ದಂತೆ. ಈ ಮಠಗಳ ಸಮಾಜಸೇವೆ ಇಲ್ಲದಿದ್ದರೆ ಶೋಷಿತ ವರ್ಗಗಳಿಗೆ ವಿದ್ಯೆ ಲಭಿಸುತ್ತಿರಲಿಲ್ಲ. ಶಿಕ್ಷಣ ಮತ್ತು ದಾಸೋಹದ ಮಹಾನ್ ಪರಂಪರೆಗೆ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಭದ್ರ ಬುನಾದಿ ಹಾಕಿದ್ದಾರೆ ಎಂದರು.</p>.<p>ಶಾಸಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ಗೋಡೆಕೆರೆ ಮಠ ಆರಂಭದಿಂದಲೂ ಅಕ್ಷರ ಜ್ಞಾನ ಮತ್ತು ದಾಸೋಹಕ್ಕೆ ಒತ್ತು ನೀಡುತ್ತ ಬಂದಿದೆ. ಇಲ್ಲಿನ ಸ್ವಾಮೀಜಿ ಮುಂಜಾನೆ ಮಕ್ಕಳಿಗೆ ಬೋಧನೆ ಮಾಡುವುದರ ಜೊತೆಗೆ, ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ಈ ಜೀವನಶೈಲಿ ಗಮನಿಸಿದರೆ ಅವರನ್ನು ‘ಕಾಯಕಯೋಗಿ’ ಎಂದು ಕರೆಯುವುದು ಅತ್ಯಂತ ಸಮಂಜಸವಾಗಿದೆ ಎಂದು ಹೇಳಿದರು.</p>.<p>ಜೆಡಿಎಸ್ ಮುಖಂಡ ಲೋಕೇಶ್ವರ್ ಮಾತನಾಡಿ, ಬಸವಣ್ಣನ ತತ್ವಗಳನ್ನು ಎಲ್ಲೊ ಹುಡುಕುವ ಬದಲು ಸ್ವಾಮೀಜಿ ಒಡನಾಟದಲ್ಲಿ ಕೆಲವು ದಿನ ಕಳೆದರೆ ಆ ತತ್ವಗಳ ನಿಜವಾದ ಪಾಲನೆ ಕಾಣಬಹುದು. ಬಸವ ಜಯಂತಿ ಕುರಿತಾಗಿರುವ ಮೌಢ್ಯ ದೂರವಾಗಬೇಕು. ಅದು ಕೇವಲ ಜಾನುವಾರುಗಳ ಹಬ್ಬವೆಂಬ ಮಿತಿಯನ್ನು ಮೀರಿ, ಬಸವಣ್ಣನ ವೈಚಾರಿಕ ಕ್ರಾಂತಿಯ ಜಯಂತಿಯಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಮಠಾಧೀಶರು ಚಿಂತನೆ ನಡೆಸಬೇಕು ಎಂದರು.</p>.<p>ಮಠಾಧೀಶರು, ಭಕ್ತರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-17-1985790778</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕನಾಯಕನಹಳ್ಳಿ: ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಿ, ಈ ವರ್ಷದ ಜುಲೈ ಅಂತ್ಯದೊಳಗೆ ತುಮಕೂರು ಜಿಲ್ಲೆಗೆ ನೀರು ತರುವ ಗುರಿ ಇದೆ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಹೇಳಿದರು.</p>.<p>ತಾಲ್ಲೂಕಿನ ಗೋಡೆಕೆರೆ ತಪೋವನದಲ್ಲಿ ಭಾನುವಾರ ನಡೆದ ಜಗದ್ಗುರು ಮೃತ್ಯುಂಜಯ ದೇಶಿ ಕೇಂದ್ರ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ತಾಲ್ಲೂಕಿನ ಕೆರೆಗಳು ಭರ್ತಿಯಾದಲ್ಲಿ ಈ ಭಾಗದ ಜನಜೀವನಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ನೀರಾವರಿ ಸೌಲಭ್ಯ ತಾಲ್ಲೂಕಿನ ಪ್ರಗತಿಗೆ ಅತಿ ಮುಖ್ಯವಾಗಿರುವುದರಿಂದ ಹೇಮಾವತಿ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಎಂದರು.</p>.<p>ಗೋಡೆಕೆರೆ ಮಠದ ಗುರು ಸಿದ್ದರಾಮೇಶ್ವರ ಗೋಪುರ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ₹4 ಕೋಟಿ ಬಿಡುಗಡೆ ಮಾಡಿದೆ. ಮಠದಿಂದ ಸಲ್ಲಿಕೆಯಾಗಿರುವ ಹೆಚ್ಚುವರಿ ₹5 ಕೋಟಿ ಬೇಡಿಕೆಯನ್ನು ಮುಖ್ಯಮಂತ್ರಿ ಗಮನಕ್ಕೆ ತಂದು, ಶೀಘ್ರದಲ್ಲೇ ಅನುಮೋದನೆ ದೊರಕಿಸಿಕೊಡಲಾಗುವುದು ಎಂದು ಹೇಳಿದರು.</p>.<p>ಕೆರಗೋಡಿ ರಂಗಾಪುರ ಮಠದ ಗುರು ಪರದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಗಳು ದಶಕಗಳಿಂದ ಗೋಡೆಕೆರೆ ಕ್ಷೇತ್ರದಲ್ಲಿ ಚರಪಟ್ಟಾಧ್ಯಕ್ಷರಾಗಿ ಕಾಯಕವೇ ಕೈಲಾಸ ತತ್ವದಡಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.</p>.<p>ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಮಾತನಾಡಿ, ನುಡಿದಂತೆ ನಡೆಯುವ ವ್ಯಕ್ತಿತ್ವದ ಗೋಡೆಕೆರೆ ಸ್ವಾಮೀಜಿ ಕಾಯಕನಿಷ್ಠೆಯಿಂದಾಗಿ ಈ ಮಠಕ್ಕೆ ಅಪಾರ ಸಂಖ್ಯೆಯ ಭಕ್ತವೃಂದವಿದೆ. ದಿನದ ಪ್ರತಿ ಕ್ಷಣವನ್ನೂ ಕಾಯಕದಲ್ಲಿಯೇ ಕಳೆಯುವ ಇವರ ಜೀವನಶೈಲಿ ಎಲ್ಲರಿಗೂ ಮಾದರಿ. ಮಠಮಾನ್ಯಗಳ ಮಾರ್ಗದರ್ಶನದಲ್ಲಿ ನಡೆಯುವ ವ್ಯಕ್ತಿಯು ಜೀವನದಲ್ಲಿ ತನ್ನ ಗುರಿಯನ್ನು ಯಶಸ್ವಿಯಾಗಿ ತಲುಪಬಲ್ಲ ಎಂದರು.</p>.<p>ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಮಠಗಳು ಕೇವಲ ಧರ್ಮದ ಸಂಕೇತಗಳಲ್ಲ, ಅವು ದಾಸೋಹ ಮತ್ತು ಜ್ಞಾನದ ಪವಿತ್ರ ಕೇಂದ್ರಗಳಾಗಿವೆ. ಲಿಂಗಾಯತ ಸಮಾಜದ ಮಠಗಳೆಂದರೆ ದಾಸೋಹಕ್ಕೆ ಪರ್ಯಾಯ ಪದಗಳಿದ್ದಂತೆ. ಈ ಮಠಗಳ ಸಮಾಜಸೇವೆ ಇಲ್ಲದಿದ್ದರೆ ಶೋಷಿತ ವರ್ಗಗಳಿಗೆ ವಿದ್ಯೆ ಲಭಿಸುತ್ತಿರಲಿಲ್ಲ. ಶಿಕ್ಷಣ ಮತ್ತು ದಾಸೋಹದ ಮಹಾನ್ ಪರಂಪರೆಗೆ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಭದ್ರ ಬುನಾದಿ ಹಾಕಿದ್ದಾರೆ ಎಂದರು.</p>.<p>ಶಾಸಕ ಸಿ.ಬಿ. ಸುರೇಶ್ ಬಾಬು ಮಾತನಾಡಿ, ಗೋಡೆಕೆರೆ ಮಠ ಆರಂಭದಿಂದಲೂ ಅಕ್ಷರ ಜ್ಞಾನ ಮತ್ತು ದಾಸೋಹಕ್ಕೆ ಒತ್ತು ನೀಡುತ್ತ ಬಂದಿದೆ. ಇಲ್ಲಿನ ಸ್ವಾಮೀಜಿ ಮುಂಜಾನೆ ಮಕ್ಕಳಿಗೆ ಬೋಧನೆ ಮಾಡುವುದರ ಜೊತೆಗೆ, ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ಈ ಜೀವನಶೈಲಿ ಗಮನಿಸಿದರೆ ಅವರನ್ನು ‘ಕಾಯಕಯೋಗಿ’ ಎಂದು ಕರೆಯುವುದು ಅತ್ಯಂತ ಸಮಂಜಸವಾಗಿದೆ ಎಂದು ಹೇಳಿದರು.</p>.<p>ಜೆಡಿಎಸ್ ಮುಖಂಡ ಲೋಕೇಶ್ವರ್ ಮಾತನಾಡಿ, ಬಸವಣ್ಣನ ತತ್ವಗಳನ್ನು ಎಲ್ಲೊ ಹುಡುಕುವ ಬದಲು ಸ್ವಾಮೀಜಿ ಒಡನಾಟದಲ್ಲಿ ಕೆಲವು ದಿನ ಕಳೆದರೆ ಆ ತತ್ವಗಳ ನಿಜವಾದ ಪಾಲನೆ ಕಾಣಬಹುದು. ಬಸವ ಜಯಂತಿ ಕುರಿತಾಗಿರುವ ಮೌಢ್ಯ ದೂರವಾಗಬೇಕು. ಅದು ಕೇವಲ ಜಾನುವಾರುಗಳ ಹಬ್ಬವೆಂಬ ಮಿತಿಯನ್ನು ಮೀರಿ, ಬಸವಣ್ಣನ ವೈಚಾರಿಕ ಕ್ರಾಂತಿಯ ಜಯಂತಿಯಾಗಿ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಮಠಾಧೀಶರು ಚಿಂತನೆ ನಡೆಸಬೇಕು ಎಂದರು.</p>.<p>ಮಠಾಧೀಶರು, ಭಕ್ತರು ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-17-1985790778</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>