ರಾಜ್ಯ ಸರ್ಕಾರ ಕಳೆದ ವಾರವೇ ಪಿಯುಸಿ ಪರೀಕ್ಷೆ ರದ್ದು ಘೋಷಿಸಿತ್ತು. ಲಾಕ್ಡೌನ್ ಇದ್ದ ಕಾರಣ ಯಾರೂ ಹೊರಗೆ ಬರದಂತಾಗಿತ್ತು. ಸೋಮವಾರ ಲಾಕ್ಡೌನ್ ಸಡಿಲಿಕೆಯಾದ ಕಾರಣ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಬಳಿ
ತೆರಳಿ ಗೇಟ್ ಬಳಿಯಲ್ಲಿ ಬೂದಗುಂಬಳ ಕಾಯಿ, ತೆಂಗಿನ ಕಾಯಿ ಒಡೆದು, ಪಟಾಕಿ ಸಿಡಿಸಿ,
ನೃತ್ಯ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.