<p><strong>ತುಮಕೂರು</strong>: ‘ಸರ್ಕಾರ ಬಡವರ ಸುಲಿಗೆ ಮಾಡುತ್ತಿದೆ. ಗ್ಯಾರಂಟಿಗೆ ಹಣ ಮೀಸಲಿಟ್ಟ ಕಾರಣ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಬಸ್ ಪ್ರಯಾಣ ದರ ಮತ್ತಷ್ಟು ಕಂಗಾಲಾಗಿಸಿದೆ’ ಎಂದು ಬಸ್ ಪ್ರಯಾಣ ದರ ಹೆಚ್ಚಿಸಲು ಮುಂದಾಗಿರುವ ಸರ್ಕಾರದ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಬಸ್ನಲ್ಲಿ ಹೆಂಡತಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿ, ಗಂಡನಿಂದ ಅದರ ಹಣ ವಸೂಲಿ ಮಾಡುತ್ತಿದ್ದಾರೆ. ಜನರ ಜೀವನ ಸುಧಾರಣೆಗೆ ಪೂರಕವಾದ ಯಾವುದೇ ಕೆಲಸಗಳು ಸರ್ಕಾರದಿಂದ ಆಗುತ್ತಿಲ್ಲ’ ಎಂದು ಪ್ರಯಾಣಿಕರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.</p> .<p><strong>ದರ ಹೆಚ್ಚಳ ಕೈ ಬಿಡಿ</strong></p>.<p>ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಓಡಾಡುವುದನ್ನು ನಿಲ್ಲಿಸಬೇಕು. ‘ಶಕ್ತಿ’ ಯೋಜನೆ ಬಂದ್ ಮಾಡಿ, ಎಲ್ಲರಿಗೂ ಈ ಹಿಂದಿನ ದರ ನಿಗದಿಪಡಿಸಬೇಕು. ಈಗಾಗಲೇ ಹಾಲು, ತರಕಾರಿ, ಪೆಟ್ರೋಲ್ ಸೇರಿ ಎಲ್ಲ ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಳದಿಂದ ಸಾಮಾನ್ಯ ಜನರು ಹೈರಾಣಾಗಿದ್ದಾರೆ. ಈಗ ಬಸ್ ದರ ಹೆಚ್ಚಿಸಿದರೆ ಬಡವರ, ಮಧ್ಯಮ ವರ್ಗದ ಜನರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ದರ ಹೆಚ್ಚಳದ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿಯಬೇಕು. ಈಗಿರುವ ದರ ಮುಂದುವರಿಸಿಕೊಂಡು ಹೋಗಬೇಕು.</p><p><strong>-ರಂಗಸ್ವಾಮಿ, ತುಮಕೂರು</strong></p>. <p><strong>ಹೆಚ್ಚಿನ ತೊಂದರೆಯಾಗಲ್ಲ</strong></p>.<p>ಬಸ್ ಪ್ರಯಾಣ ದರ ಹೆಚ್ಚಳದಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ. ಬದಲಾಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಲು ನಾವು ಹಣ ಕೊಟ್ಟಂತೆ ಆಗುತ್ತದೆ. ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಮ್ಮ ತೆರಿಗೆ ಹಣ ಸಹಾಯಕವಾಗುತ್ತದೆ.</p><p><strong>-ಸೈಯದ್ ಮಹಬೂಬ್, ತುಮಕೂರು</strong></p>.<p><strong>‘ಶಕ್ತಿ’ ಯೋಜನೆ ಹಿಂಪಡೆಯಿರಿ</strong></p><p>ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಸರ್ಕಾರಕ್ಕೆ ಮುಜುಗರ ತರುತ್ತದೆ. ಯಾವುದೇ ಕಾರಣಕ್ಕೂ ದರ ಹೆಚ್ಚಿಸಬಾರದು. ಹಾಲಿನ ದರ ಮತ್ತಷ್ಟು ಹೆಚ್ಚಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದು ಹೀಗೆ ಮುಂದುವರಿದರೆ ರಾಜ್ಯದಲ್ಲಿ ಸಾಮಾನ್ಯ ಜನರು ಬದುಕು ಸಾಗಿಸುವುದು ಕಷ್ಟವಾಗುತ್ತದೆ. ‘ಶಕ್ತಿ’ ಯೋಜನೆ ಹಿಂಪಡೆದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.</p><p><strong>-ಗಂಗಾಧರ್, ಕಳ್ಳಬೆಳ್ಳ, ಶಿರಾ</strong></p>.<p><strong>ಓಡಾಟವೇ ಕಷ್ಟ</strong></p><p>ಶೇ 5ರಷ್ಟು ಹೆಚ್ಚಿಸಿದರೆ ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗಬಹುದು. ಬರೋಬ್ಬರಿ ಶೇ 15ರಷ್ಟು ಹೆಚ್ಚು ಮಾಡಿದರೆ ಸಾಮಾನ್ಯ ಜನರು ಬಸ್ನಲ್ಲಿ ಪ್ರಯಾಣಿಸಲು ಹೆದರುತ್ತಾರೆ. ಸರ್ಕಾರದ ಬಳಿ ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ ಎಂಬ ವಿರೋಧ ಪಕ್ಷದ ಆರೋಪ ನಿಜ ಎನಿಸುತ್ತದೆ. ಇದುವರೆಗೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜನಪರ ಕೆಲಸ ಮಾಡಬೇಕು.</p><p><strong>-ವೆಂಕಟೇಶ್, ಸೀಬಿ, ತುಮಕೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ‘ಸರ್ಕಾರ ಬಡವರ ಸುಲಿಗೆ ಮಾಡುತ್ತಿದೆ. ಗ್ಯಾರಂಟಿಗೆ ಹಣ ಮೀಸಲಿಟ್ಟ ಕಾರಣ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಬಸ್ ಪ್ರಯಾಣ ದರ ಮತ್ತಷ್ಟು ಕಂಗಾಲಾಗಿಸಿದೆ’ ಎಂದು ಬಸ್ ಪ್ರಯಾಣ ದರ ಹೆಚ್ಚಿಸಲು ಮುಂದಾಗಿರುವ ಸರ್ಕಾರದ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಬಸ್ನಲ್ಲಿ ಹೆಂಡತಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿ, ಗಂಡನಿಂದ ಅದರ ಹಣ ವಸೂಲಿ ಮಾಡುತ್ತಿದ್ದಾರೆ. ಜನರ ಜೀವನ ಸುಧಾರಣೆಗೆ ಪೂರಕವಾದ ಯಾವುದೇ ಕೆಲಸಗಳು ಸರ್ಕಾರದಿಂದ ಆಗುತ್ತಿಲ್ಲ’ ಎಂದು ಪ್ರಯಾಣಿಕರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.</p> .<p><strong>ದರ ಹೆಚ್ಚಳ ಕೈ ಬಿಡಿ</strong></p>.<p>ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಓಡಾಡುವುದನ್ನು ನಿಲ್ಲಿಸಬೇಕು. ‘ಶಕ್ತಿ’ ಯೋಜನೆ ಬಂದ್ ಮಾಡಿ, ಎಲ್ಲರಿಗೂ ಈ ಹಿಂದಿನ ದರ ನಿಗದಿಪಡಿಸಬೇಕು. ಈಗಾಗಲೇ ಹಾಲು, ತರಕಾರಿ, ಪೆಟ್ರೋಲ್ ಸೇರಿ ಎಲ್ಲ ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಳದಿಂದ ಸಾಮಾನ್ಯ ಜನರು ಹೈರಾಣಾಗಿದ್ದಾರೆ. ಈಗ ಬಸ್ ದರ ಹೆಚ್ಚಿಸಿದರೆ ಬಡವರ, ಮಧ್ಯಮ ವರ್ಗದ ಜನರ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ದರ ಹೆಚ್ಚಳದ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಸರಿಯಬೇಕು. ಈಗಿರುವ ದರ ಮುಂದುವರಿಸಿಕೊಂಡು ಹೋಗಬೇಕು.</p><p><strong>-ರಂಗಸ್ವಾಮಿ, ತುಮಕೂರು</strong></p>. <p><strong>ಹೆಚ್ಚಿನ ತೊಂದರೆಯಾಗಲ್ಲ</strong></p>.<p>ಬಸ್ ಪ್ರಯಾಣ ದರ ಹೆಚ್ಚಳದಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ. ಬದಲಾಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಲು ನಾವು ಹಣ ಕೊಟ್ಟಂತೆ ಆಗುತ್ತದೆ. ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಮ್ಮ ತೆರಿಗೆ ಹಣ ಸಹಾಯಕವಾಗುತ್ತದೆ.</p><p><strong>-ಸೈಯದ್ ಮಹಬೂಬ್, ತುಮಕೂರು</strong></p>.<p><strong>‘ಶಕ್ತಿ’ ಯೋಜನೆ ಹಿಂಪಡೆಯಿರಿ</strong></p><p>ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಸರ್ಕಾರಕ್ಕೆ ಮುಜುಗರ ತರುತ್ತದೆ. ಯಾವುದೇ ಕಾರಣಕ್ಕೂ ದರ ಹೆಚ್ಚಿಸಬಾರದು. ಹಾಲಿನ ದರ ಮತ್ತಷ್ಟು ಹೆಚ್ಚಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದು ಹೀಗೆ ಮುಂದುವರಿದರೆ ರಾಜ್ಯದಲ್ಲಿ ಸಾಮಾನ್ಯ ಜನರು ಬದುಕು ಸಾಗಿಸುವುದು ಕಷ್ಟವಾಗುತ್ತದೆ. ‘ಶಕ್ತಿ’ ಯೋಜನೆ ಹಿಂಪಡೆದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.</p><p><strong>-ಗಂಗಾಧರ್, ಕಳ್ಳಬೆಳ್ಳ, ಶಿರಾ</strong></p>.<p><strong>ಓಡಾಟವೇ ಕಷ್ಟ</strong></p><p>ಶೇ 5ರಷ್ಟು ಹೆಚ್ಚಿಸಿದರೆ ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗಬಹುದು. ಬರೋಬ್ಬರಿ ಶೇ 15ರಷ್ಟು ಹೆಚ್ಚು ಮಾಡಿದರೆ ಸಾಮಾನ್ಯ ಜನರು ಬಸ್ನಲ್ಲಿ ಪ್ರಯಾಣಿಸಲು ಹೆದರುತ್ತಾರೆ. ಸರ್ಕಾರದ ಬಳಿ ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ ಎಂಬ ವಿರೋಧ ಪಕ್ಷದ ಆರೋಪ ನಿಜ ಎನಿಸುತ್ತದೆ. ಇದುವರೆಗೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜನಪರ ಕೆಲಸ ಮಾಡಬೇಕು.</p><p><strong>-ವೆಂಕಟೇಶ್, ಸೀಬಿ, ತುಮಕೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>