ರೈತ ರಂಗನಾಥಪ್ಪ (52) ಮೃತರು. ಕೈ ಸಾಲ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಮೂರು ಕೊಳವೆ ಬಾವಿ ಕೊರೆಸಿದ್ದ ರಂಗನಾಥಪ್ಪ ಕೊಳವೆ ಬಾವಿಗಳಲ್ಲಿ ನೀರು ಸಿಗದ ಕಾರಣ ಬೇಸರಗೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕ್ರಿಮಿನಾಶಕ ಔಷಧಿ ಕುಡಿದಿದ್ದಾರೆ. ತಂದೆ ಒದ್ದಾಡುತ್ತಿದ್ದದನ್ನು ಗಮನಿಸಿದ ಮಗ ರಾಜಕುಮಾರ್ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ರಂಗನಾಥಪ್ಪ ಮೃತಪಟ್ಟಿದ್ದಾರೆ.