ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಕೆಲಸ ನೀಡಲು ಆಗ್ರಹಿಸಿ ಅನ್ನದಾತರ ಪ್ರತಿಭಟನೆ

Last Updated 3 ನವೆಂಬರ್ 2020, 3:07 IST
ಅಕ್ಷರ ಗಾತ್ರ

ಪಾವಗಡ: ಸೋಲಾರ್ ಕಂಪನಿಯೇ ನೇರವಾಗಿ ರೈತರಿಗೆ ಸೋಲಾರ್ ಮಾಡ್ಯುಲ್ ಸ್ವಚ್ಛತೆ, ಹುಲ್ಲು ಕಟಾವು ಕೆಲಸ ನೀಡಬೇಕು ಎಂದು ಒತ್ತಾಯಿಸಿ 21ನೇ ಬ್ಲಾಕ್‌ಗೆ ಜಮೀನು ನೀಡಿರುವ ರೈತರು ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸೋಲಾರ್ ಪಾರ್ಕ್‌ 21ನೇ ಬ್ಲಾಕ್‌ನ ಟಾಟಾ ಪವರ್ ಸೋಲಾರ್ ಕಂಪನಿಯು ಸಿದ್ಧಾರ್ಥ ಕಂಪನಿಗೆ ನಿರ್ವಹಣೆಯ ಉಪ ಗುತ್ತಿಗೆ ನೀಡಿದೆ. ಉಪ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯು ರೈತರಿಗೆ ಸ್ವಚ್ಛತೆ, ಹುಲ್ಲು ಕಟಾವು ಕೆಲಸ ಕೊಡದೆ ಸತಾಯಿಸುತ್ತಿದೆ. ಕೆಲಸ ಕೇಳಲು ಹೋದ ರೈತರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ರೈತರು ಆರೋಪಿಸಿದರು.

ಆರಂಭದಲ್ಲಿ ಜಮೀನು ಪಡೆಯುವಾಗ ರೈತರಿಗೆ ಕೆಲಸ ನೀಡುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದರು. ಆದರೆ, ಕಂಪನಿ ನೇರವಾಗಿ ಕೆಲಸ ನೀಡುತ್ತಿಲ್ಲ. ಕೆಲಸ ಕೊಡುವಂತೆ ಕೇಳಲು ಹೋಗುವ ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ರೈತರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ, ಅನ್ನದಾತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಟಾಟಾ ಕಂಪನಿಯವರೆ ನೇರವಾಗಿ ರೈತರಿಗೆ ಸ್ವಚ್ಛತೆ, ಹುಲ್ಲು ಕಟಾವು ಕೆಲಸ ನೀಡಬೇಕು. ರೈತರ ಮೇಲೆ ದಬ್ಬಾಳಿಕೆ ನಡೆಸುವ ಕಂಪನಿಯನ್ನು 21ನೇ ಬ್ಲಾಕ್‌ನಿಂದ ಹೊರಗಿಡಬೇಕು. ಬಾಡಿಗೆ ಹಣವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ನಾಗರಾಜು ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಶ್ರೀಕಾಂತ್, ಅಮರೇಂದ್ರ, ನಾಗರಾಜು, ಮಾರುತಿ, ಅರುಣ್, ರಾಮಾಂಜಿ, ಶ್ರೀಧರ್, ಅಕ್ಕಲಪ್ಪ, ಪೂಜಾರಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT