ಯುಗಾದಿ ಹಬ್ಬದಂದು ಹೊಸ ಅಶ್ವಿನಿ ಮಳೆ ಆರಂಭವಾಗಿದೆ. ಆರಂಭದಲ್ಲಿಯೇ ಮಳೆ ಬಂದು ರೈತರು ಹಿಂಗಾರು ಬೆಳೆಯನ್ನು ಕೊಯ್ಲು ಮಾಡಿದ್ದ ಹೊಲಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಅನುವು ಮಾಡಿಕೊಟ್ಟಿತ್ತು. ಭರಣಿ ಮಳೆ ಹೆಸರು ಬಿತ್ತನೆಗೆ ಸಕಾಲವಾಗಿದ್ದು, ಈಗ ಮಳೆಯ ಪ್ರವೇಶವಾಗಿದೆ. ಸಾಮಾನ್ಯವಾಗಿ ಭರಣಿ ಮಳೆ ಎಲ್ಲ ಬೆಳೆಗಳಿಗೂ ಪೂರವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಪೂರ್ವ ಮುಂಗಾರಿನ ವೇಳೆ ಮಳೆ ಬಾರದೆ ಬೀಜ ಬಿತ್ತನೆಗೆ ಹಿನ್ನಡೆಯಾಗಿತ್ತು. ಈ ಬಾರಿ ಆರಂಭದಲ್ಲಿಯೇ ಮಳೆ ಅಲ್ಲಲ್ಲಿ ಆಗುತ್ತಿದ್ದು ಕೆಲ ಕಡೆ ಹೆಸರು ಬಿತ್ತನೆಯನ್ನು ಮಾಡುತ್ತಿದ್ದಾರೆ.