ಕರ್ನಾಟಕ ರಾಜ್ಯ ಮರಾಟ ಮಹಾ ಮಂಡಳಿ ರಾಗಿ ಖರೀದಿಯನ್ನು ಕಳೆದೆರಡು ದಿವಸಗಳಿಂದ ಆರಂಭಿಸಿದೆ. ರೈತರು ಎಸ್ಎಲ್ಆರ್ ಪೆಟ್ರೋಲ್ ಬಂಕ್ ತಿರುವಿನಿಂದ ಎಪಿಎಂಸಿವರೆಗೆ ರಾಗಿ ತುಂಬಿದ ಸುಮಾರು 80 ಟ್ರ್ಯಾಕ್ಟರ್ಗಳು ಪ್ರತಿದಿನ ನಿಲ್ಲುತ್ತವೆ. ಹೆದ್ದಾರಿಯಲ್ಲಿಯೇ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿಕೊಂಡು ಮಳೆ, ಚಳಿ, ಗಾಳಿಯನ್ನು ಅನುಭವಿಸುತ್ತಾ ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆ ಬಂದರಂತೂ ರಸ್ತೆಯಲ್ಲಿ ರಾಗಿ ಹಾಗೂ ತಾವು ನೆನೆಯದಂತೆ ಸುರಕ್ಷತೆ ವಹಿಸುವುದೇ ದೊಡ್ಡ ಸವಾಲಾಗಿದೆ.