ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷುಲ್ಲಕ ಕಾರಣಕ್ಕೆ ಜಗಳ; ಮಹಾರಾಷ್ಟ್ರದ ಕಾರ್ಮಿಕ ಸಾವು

Last Updated 3 ಜೂನ್ 2019, 17:18 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ತಾವರೆಕೆರೆ ಸಮೀಪ ನಾರಾಯಣಪುರ ಗ್ರಾಮದ ಹತ್ತಿರ ಸೋಮವಾರ ಕ್ಷುಲ್ಲಕ ಕಾರಣಕ್ಕೆ ಮಹಾರಾಷ್ಟ್ರ ಮೂಲದ ಕಾರ್ಮಿಕರಿಬ್ಬರು ಜಗಳ ಆಡುವಾಗ ಒಬ್ಬ ಕಾರ್ಮಿಕ ಕೊಲೆಯಾಗಿದ್ದಾನೆ.

ಅಹಮ್ಮದ್‌ನಗರದ ಪಾಂಡುಕಿಷನ್ ಹಿಲಂ (35) ಕೊಲೆಯಾದ ಕೂಲಿ ಕಾರ್ಮಿಕ. ರಾಯಗಡದ ತುಕಾರಾಮ್ ಕೊಲೆ ಆರೋಪಿಯಾಗಿದ್ದಾನೆ ಎಂದು ತಾವರೆಕೆರೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ಇಬ್ಬರೂ ಕಾರ್ಮಿಕರು ಕುಟುಂಬ ಸಮೇತರಾಗಿ ಶಿರಾ ತಾಲ್ಲೂಕಿಗೆ ಬಂದಿದ್ದರು. ನಾರಾಯಣಪುರದ ಬಳಿ ಬಳ್ಳಾರಿ ಜಾಲಿ ಗಿಡ ಕಡಿದು ಇದ್ದಿಲು ತಯಾರಿಸಿ ಮಾರಾಟ ಮಾಡುತ್ತಿದ್ದರು. ಭಾನುವಾರ ರಾತ್ರಿ ಇಬ್ಬರೂ ಪಾನಮತ್ತರಾಗಿದ್ದಾಗ ಕ್ಷುಲಕ ಕಾರಣಕ್ಕೆ ಜಗಳವಾಗಿದ್ದರು. ಸೋಮವಾರ ಬೆಳಿಗ್ಗೆ ಮತ್ತೆ ಜಗಳವಾಡುತ್ತಿದ್ದಾಗ ಆರೋಪಿ ತುಕಾರಾಮ್ ಸೌದೆಯಿಂದ ಪಾಂಡು ಕಿಷನ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT