ನಾಲ್ಕು ತಿಂಗಳ ಹಿಂದೆ ಇಬ್ಬರೂ ಕಾರ್ಮಿಕರು ಕುಟುಂಬ ಸಮೇತರಾಗಿ ಶಿರಾ ತಾಲ್ಲೂಕಿಗೆ ಬಂದಿದ್ದರು. ನಾರಾಯಣಪುರದ ಬಳಿ ಬಳ್ಳಾರಿ ಜಾಲಿ ಗಿಡ ಕಡಿದು ಇದ್ದಿಲು ತಯಾರಿಸಿ ಮಾರಾಟ ಮಾಡುತ್ತಿದ್ದರು. ಭಾನುವಾರ ರಾತ್ರಿ ಇಬ್ಬರೂ ಪಾನಮತ್ತರಾಗಿದ್ದಾಗ ಕ್ಷುಲಕ ಕಾರಣಕ್ಕೆ ಜಗಳವಾಗಿದ್ದರು. ಸೋಮವಾರ ಬೆಳಿಗ್ಗೆ ಮತ್ತೆ ಜಗಳವಾಡುತ್ತಿದ್ದಾಗ ಆರೋಪಿ ತುಕಾರಾಮ್ ಸೌದೆಯಿಂದ ಪಾಂಡು ಕಿಷನ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಠಾಣೆಯ ಸಬ್ ಇನ್ಸ್ಪೆಕ್ಟರ್ ಹೇಳಿದ್ದಾರೆ.