ಪಟ್ಟಣದಲ್ಲಿ ಮಂಗಳವಾರ ಪೌಷ್ಟಿಕ ಆಹಾರ ವಿತರಣೆ ನಂತರ ಮಾತನಾಡಿದ ಅವರು, ‘ಕಾರ್ಮಿಕ ಸಚಿವನಾಗಿದ್ದಾಗ ಕಮ್ಮಾರ, ಚಮ್ಮಾರ, ಮಡಿವಾಳ, ಕುಂಬಾರ ಸೇರಿದಂತೆ ಅಸಂಘಟಿತ ಕಾರ್ಮಿಕರ ವಲಯಕ್ಕೆ ಸಾಂಪ್ರದಾಯಿಕ ಕಸುಬು ಮಾಡುವ ಜನಾಂಗದವರನ್ನು ಸೇರಿಸಲಾಗಿದೆ. ತಳ ಸಮುದಾಯದ ಬಡ ಜನರಿಗೂ ವಿವಾಹಕ್ಕೆ, ಶಿಕ್ಷಣಕ್ಕೆ ಅಗತ್ಯ ಆರ್ಥಿಕ ನೆರವು ಸಿಗುವಂತೆ ಮಾಡಲಾಗಿದೆ’ ಎಂದರು.