ಎಪಿಎಂಸಿ ನಿರ್ದೇಶಕರಾದ ಮಲ್ಯ ನಾಗರಾಜು, ವಡ್ಡರಕುಪ್ಪೆ ನಾಗರಾಜು, ಕುಂಬಳಕಾಯಿ ರಾಜಣ್ಣ ಮತ್ತು ಸುರೇಶ್ ಜಂಟಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ಬೆಂಬಲಬೆಲೆಯಲ್ಲಿ ರಾಗಿ ಖರೀದಿಕೇಂದ್ರ ಪ್ರಾರಂಭಿಸಲಾಗಿತ್ತು. ತಾಲ್ಲೂಕಿನ ನೂರಾರು ರೈತರು ಸಾವಿರಾರು ಕ್ವಿಂಟಲ್ ರಾಗಿಯನ್ನು ತಂದು ಹಾಕಿದ್ದರು. ಕೆಲವರಿಗೆ ದಾಖಲೆ ನೀಡಲಾಗಿದೆ, ಮತ್ತೆ ಕೆಲವರಿಗೆ ದಾಖಲೆಗಳನ್ನು ನೀಡಲಾಗಿಲ್ಲ.