ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಖಾತೆ ಖಾತ್ರಿ ಹೆಸರಲ್ಲಿ ವಂಚನೆ

Last Updated 5 ಜುಲೈ 2019, 17:13 IST
ಅಕ್ಷರ ಗಾತ್ರ

ತುಮಕೂರು: ಬ್ಯಾಂಕ್ ಖಾತೆ ಖಾತ್ರಿಗಾಗಿ ಕೇಳುತ್ತಿದ್ದೇವೆ. ನಾವು ಹೇಳುವ 9 ಸಂಖ್ಯೆ ಡಯಲ್ ಮಾಡಿ ಎಂದು ವಂಚಕರು ಬ್ಯಾಂಕ್ ಗ್ರಾಹಕರೊಬ್ಬರಿಗೆ ಕರೆ ಮಾಡಿ ಆ ಗ್ರಾಹಕರ ಬ್ಯಾಂಕ್ ಖಾತೆಯಿಂದ ₹ 7,700 ಡ್ರಾ ಮಾಡಿಕೊಂಡು ವಂಚನೆ ಮಾಡಿರುವ ಪ್ರಕರಣ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್. ರೇಖಾ ಅವರ ಪುತ್ರ ವಂಚನೆಗೊಳಗಾದ ಗ್ರಾಹಕ.ಭೀಮಸಂದ್ರ ಎಸ್‌ಬಿಐ ಶಾಖೆಯಲ್ಲಿ ಅವರ ಮಗನ ಹೆಸರಿನಲ್ಲಿ ಖಾತೆ ತೆರೆದಿದ್ದರು. ಜುಲೈ 2ರಂದು ರೇಖಾ ಅವರ ಮಗನಿಗೆ ವಂಚಕರು ಮೊಬೈಲ್ ಕರೆ ಮಾಡಿ ಹಣ ಡ್ರಾ ಮಾಡಿದ್ದಾರೆ.

ಜುಲೈ 3ರಂದು ಮಧ್ಯಾಹ್ನ 12 ಗಂಟೆಗೆ ರೇಖಾ ಅವರು ಸಿದ್ಧಗಂಗಾ ಬಡಾವಣೆ ಎಸ್‌ಬಿಐ ಶಾಖೆಯಲ್ಲಿ ಬ್ಯಾಂಕ್ ಖಾತೆಯಲ್ಲಿ ಪರಿಶೀಲನೆ ಮಾಡಿದಾಗ ವಂಚಕರು ಹಣ ಡ್ರಾ ಮಾಡಿಕೊಂಡಿರುವುದು ಗೊತ್ತಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT