ದಾಳಿ ಹಿಂದೆರಾಜಕೀಯ ಇಲ್ಲ:ನಟ ರಮೇಶ್ ಅರವಿಂದ್
‘ಯಶ್, ಪುನೀತ್, ಸುದೀಪ್, ಶಿವರಾಜ್ಕುಮಾರ್ದೊಡ್ಡ ನಟರು ಎಂಬ ಕಾರಣಕ್ಕೆ ಐಟಿ ದಾಳಿ ಗಮನ ಸೆಳೆಯುತ್ತಿದೆ ಅಷ್ಟೇ.ಆದಾಯ ಹೆಚ್ಚಾಗಿ ಇರಬಹುದೆಂಬ ಊಹೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಇದುಅಧಿಕಾರಿಗಳು ನಿರಂತರವಾಗಿ ನಡೆಸುವ ಪ್ರಕ್ರಿಯೆ. ಅನುಮಾನ ಬಂದಾಗ ಶೋಧನೆ ನಡೆಯುವುದು ಸಹಜ. ದಾಳಿ ನಡೆದಾಗ ಇದರಲ್ಲಿ ರಾಜಕೀಯ ಇದೆ ಎಂಬ ಆರೋಪಗಳು ಬರುತ್ತವೆ. ಆದರೆ ದಾಳಿಯ, ಹಿಂದೆ ರಾಜಕೀಯವಿದೆ ಎಂದು ನನಗೆ ಅನಿಸಿಲ್ಲ’ ಎಂದು ನಟ ರಮೇಶ್ ಅರವಿಂದ್ಪ್ರತಿಕ್ರಿಯಿಸಿದರು.