ಕಾಳಿದಾಸನಗರದ ನಾಗರತ್ನಮ್ಮ ಅವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ವಾಸನೆ ಬಂದಿದೆ. ಸರಿ ಪಡಿಸಲು ಪಕ್ಕದ ಮನೆಯ ನಾಗರಾಜು, ರೂಪಾ, ಚಂದ್ರಶೇಖರ್, ನಟರಾಜು ಬಂದಿದ್ದರು. ಸರಿ ಪಡಿಸುತ್ತಿದ್ದಾಗ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗಿ ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಹತ್ತಿಕೊಂಡು ನಾಲ್ಕು ಜನರಿಗೂ ಗಾಯಗಳಾಗಿದೆ.