ಪಾವಗಡ: ತಾಲ್ಲೂಕಿನ ಮುರಾರಾಯನಹಳ್ಳಿ ಗ್ರಾಮದ ಬಳಿ ಸೋಮವಾರ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ.
ಎಡೆಯೂರಿನಿಂದ ಅನಂತಪುರದ ಕಡೆಗೆ ಹೋಗುತ್ತಿದ್ದ ಅಡುಗೆ ಅನಿಲದ ಟ್ಯಾಂಕರ್ ಗ್ರಾಮದ ತಿರುವಿನಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಿದ್ದ ರಭಸಕ್ಕೆ ಟ್ಯಾಂಕರ್ಗೆ ಹಾನಿಯಾಗಿದ್ದು ಗ್ಯಾಸ್ ಹೊರ ಬರುತ್ತಿದೆ.
ಕೂಡಲೇ ಪಟ್ಟಣ ಠಾಣೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಜನರನ್ನು ಸ್ಥಳಾಂತರಿಸಿದ್ದಾರೆ. ಈ ಮಾರ್ಗವಾಗಿ ವಾಹನಗಳು ಸಂಚರಿಸದಂತೆ ಕ್ರಮ ತೆಗೆದುಕೊಂಡಿದ್ದಾರೆ.
ಅಡುಗೆ ಅನಿಲ ಹೊರ ಬರುತ್ತಿರುವುದರಿಂದ ಗ್ರಾಮವನ್ನು ಅನಿಲ ವಾಸನೆ ಆವರಿಸಿದೆ. ಯಾವುದೆ ಅವಘಡ ಸಂಭವಿಸದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.