ತುಮಕೂರು: ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಸಾಹಿತಿ ಎನ್.ನಾಗಪ್ಪ ತಿಳಿಸಿದರು.
ನಗರದ ಎಸ್ಐಟಿ ಮುಖ್ಯರಸ್ತೆಯಲ್ಲಿರುವ ವಾಸವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕುವೆಂಪು ಅವರ 115 ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಹೆಚ್ಚು ಸಾಹಿತ್ಯ, ಕಾದಂಬರಿಗಳನ್ನು ಓದಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಹಾಗೇ ಹೊಸ ವರ್ಷದಲ್ಲಿ ಕುವೆಂಪು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಆರಾಧ್ಯ, ಉಪನ್ಯಾಸಕರಾದ ಜಿ.ಹನುಮಂತಯ್ಯ, ನರೇಂದ್ರಬಾಬು, ಶಿವಣ್ಣ, ಬೆಂಕಿ ವಸಂತ, ಸಂಧ್ಯಾ, ಉಷಾರಾಣಿ, ದೀಪಶ್ರೀ, ಭರತ, ಆನಂದ, ಚಂದ್ರಕಲಾ, ಲಾವಣ್ಯ ಮತ್ತು ರಾಜಲಕ್ಷ್ಮಿ ಇದ್ದರು.