ಮಾನಸ ಇರಕಸಂದ್ರ ಕಾಲೊನಿ ನಿವಾಸಿ. ದೇವರಾಯನದುರ್ಗದಲ್ಲಿ ನಡೆಯಲಿದ್ದ ರಥೋತ್ಸವಕ್ಕೆ ಜಿ.ನಾಗೇನಹಳ್ಳಿ ಗ್ರಾಮದ ಮೂಲಕ ಅರಣ್ಯ ಪ್ರದೇಶದ ಕಾಲು ದಾರಿಯಲ್ಲಿ ಹೋಗುತ್ತಿದ್ದ ಸಮಯದಲ್ಲಿ ಅವಘಡ ಸಂಭವಿಸಿದೆ. ಜತೆಯಲ್ಲಿ ಇದ್ದ ಇನ್ನಿಬ್ಬರು ಬಾಲಕಿಯರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಪ್ರದೇಶದ ಕೆಳ ಭಾಗದ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿ ಬೆಟ್ಟಕ್ಕೆ ತೆರಳುವ ಕಾಲು ದಾರಿಯನ್ನು ಆವರಿಸಿದೆ. ಇದನ್ನು ಗಮನಿಸದೆ ಬಾಲಕಿಯರು ಮುಂದೆ ಸಾಗಿದ್ದು, ಗಾಳಿ ಬೀಸಿದ ರಭಸಕ್ಕೆ ಬೆಂಕಿಯ ಜ್ವಾಲೆ ತಗುಲಿದೆ.