ಮಧುಗಿರಿ: ಪಟ್ಟಣದ ರಾಘವೇಂದ್ರ ಸ್ವಾಮಿಯ 8 ಗ್ರಾಂ ತೂಕದ ಬಂಗಾರದ ಕಣ್ಣು ಹೂವಿನೊಂದಿಗೆ ತ್ಯಾಜ್ಯ ಘಟಕಕ್ಕೆ ಸೇರಿತ್ತು.
ಗುರುವಾರ ದೇವರ ವಿಗ್ರಹವನ್ನು ತೊಳೆಯುವಾಗ ಒಂದು ಕಣ್ಣು ಮಾತ್ರ ಕಾಣಿಸಿದೆ. ಕಸ ವಿಲೇವಾರಿ ಘಟಕಕ್ಕೆ ತೆರಳಿ ಹುಡುಕಿದಾಗ ಬಂಗಾರದ ಕಣ್ಣು ಪತ್ತೆಯಾಗಿದೆ. ಅದನ್ನು ಪುರಸಭೆ ಅಧಿಕಾರಿಗಳು ದೇವಾಲಯಕ್ಕೆ ತಲುಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.