ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ದಿನ: ಘೋಷವಾಕ್ಯ ರಚನಾ ಸ್ಪರ್ಧೆ

Last Updated 27 ಮೇ 2020, 15:24 IST
ಅಕ್ಷರ ಗಾತ್ರ

ತುಮಕೂರು: ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಗುಬ್ಬಚ್ಚಿ ಸಂಘ ಐದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಘೋಷವಾಕ್ಯ ರಚನಾ ಸ್ಪರ್ಧೆ ಏರ್ಪಡಿಸಿದೆ.

ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಬಗ್ಗೆ ಘೋಷವಾಕ್ಯವನ್ನು ಅಂಚೆಕಾರ್ಡಿನಲ್ಲಿ ಬರೆದು ತಮ್ಮ ಪೂರ್ಣ ಹೆಸರು, ವಿಳಾಸ, ಶಾಲೆ ಹೆಸರು, ತರಗತಿ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು. ಪ್ರಕಾಶ್ ಕೆ.ನಾಡಿಗ್, ಗುಬ್ಬಚ್ಚಿ ಸಂಘ, ಆಭಯ್ ರಾಘವಿ, ನಂ-103, 5ನೇ ಅಡ್ಡರಸ್ತೆ, ಸ್ನೇಹಕ್ಲಿನಿಕ್ ಹಿಂಭಾಗ, ಭೋವಿಪಾಳ್ಯ ಹತ್ತಿರ, ಬಾಲಾಜಿ ನಗರ, ಊರುಕೆರೆ, ತುಮಕೂರು-572106 ಇಲ್ಲಿಗೆ ಜೂನ್ 10ರ ಒಳಗೆ ತಲುಪುವಂತೆ ಕಳುಹಿಸಬೇಕು. ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ವಿವರಗಳಿಗೆ ಸಂಘದ ಕಾರ್ಯದರ್ಶಿ ಅಭಯ್ ಪಿ.ನಾಡಿಗ್ 8277646419 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT