ತುಮಕೂರು: ಲಾಕ್ಡೌನ್ನಿಂದ ದೇಶದ ಜನರೇ ಮನೆಯಲ್ಲಿ ಬಂಧಿಯಾಗಬೇಕು ಎಂಬ ಸೂಚನೆ ಜಾರಿಯಲ್ಲಿದ್ದರೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಮ್ಮಗನೊಂದಿಗೆ ಆಟವಾಡಿದರು.
ಮಗಳ ಮಗ ರಿಶಿಯನ್ನು ರಿಮೋಟ್ ನಿಯಂತ್ರಿತ ಆಟಿಕೆ ಜಿಪ್ ನಲ್ಲಿ ಕೂರಿಸಿ, ತುಮಕೂರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಆಟವಾಡುತ್ತ ಸಂತಸ ಪಟ್ಟರು.
ಮಗುವನ್ನು ಆಟವಾಡಿಸುತ್ತಿದ್ದ ಹೆದ್ದಾರಿ ಸ್ಥಳದ ಬದಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿ ಇದೆ. ಶಾಸಕ ಮತ್ತು ಅವರ ಮೊಮ್ಮಗನ ಆಟಕ್ಕೆ ಭಂಗ ತಾರದೆ, ರೌಂಡ್ಸ್ ನಲ್ಲಿದ್ದ ಪೊಲೀಸರು ನೋಡಿದರೂ, ನೋಡದಂತೆ ತಮ್ಮ ಜೀಪ್ ನಲ್ಲಿ ಸಾಗಿದರು.