ತುಮಕೂರು: ‘ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂಬ ವಿಚಾರ ಕೇಳಿ ಮನಸ್ಸಿಗೆ ನೋವಾಗಿದೆ. ಒಂದು ಸಮುದಾಯ ಎಷ್ಟರಮಟ್ಟಿಗೆ ನಡೆದುಕೊಳ್ಳುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ತಾಲ್ಲೂಕಿನ ಬಳಗೆರೆಯಲ್ಲಿ ಮಾತ ನಾಡಿದ ಅವರು, ‘ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು ಅವರಷ್ಟು ಎತ್ತರಕ್ಕೆ ಬೆಳೆದ ಮತ್ತೊಬ್ಬ ವ್ಯಕ್ತಿ ಸಿಗುವು ದಿಲ್ಲ. ಅವರಿಗೆ ಅವಮಾನಿಸುತ್ತಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಬೀದಿಯಲ್ಲಿ ನಿಂತು ಹೋರಾಡುವ ಶಕ್ತಿ ಇಲ್ಲ’ ಎಂದರು.
‘ಕುವೆಂಪು ರಾಷ್ಟ್ರಮಟ್ಟದ ವ್ಯಕ್ತಿ. ಹಿಂದೆ ಏನು ನಡೆದಿತ್ತು ಎಂದು ಹೇಳಲು ಹೋಗುವುದಿಲ್ಲ. ಕುವೆಂಪು ಮನಸ್ಸಿನಲ್ಲಿ ಏನಿತ್ತುಎಂಬ ಚರ್ಚೆ ಅನಗತ್ಯ. ಮೇರುವ್ಯಕ್ತಿಗೆ ಗೌರವ ಕೊಡುವುದನ್ನು ಮೊದಲು ಕಲಿಯಬೇಕು’ ಎಂದರು.