ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗಲು ಇದುವರೆಗೂ ಒಪ್ಪಿಲ್ಲ. ಎಲ್ಲ ಶಾಸಕರು ಒಟ್ಟಿಗೆ ತೆರಳಿ ಅವರ ಮನವೊಲಿಸಬೇಕು ಎಂದು ತೀರ್ಮಾನಿಸಿದ್ದೇವೆ. ಅವರು ಕೇಂದ್ರ ಸರ್ಕಾರಕ್ಕೆ ಸಲಹೆ, ಸೂಚನೆಗಳನ್ನು ಕೊಡಬೇಕಾಗಿದೆ. ಇದರಿಂದ ದೇಶ, ರಾಜ್ಯಕ್ಕೆ ಒಳ್ಳೆಯ ಹೆಸರು ಬರಲಿದೆ. ಕೊರೊನಾ ಸೋಂಕಿನಿಂದ ದೇಶವೇ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಕೃಷಿ ವಿಚಾರದಲ್ಲಿ ಅವರ ಅನುಭವ ಕೇಂದ್ರ ಸರ್ಕಾರಕ್ಕೆ ಅವಶ್ಯವಾಗಿದೆ ಅತ್ಯವಶ್ಯಕವಾಗಿದೆ ಎಂದು ಹೇಳಿದ್ದಾರೆ.