ಪುಟ್ಟಸಿದ್ದಯ್ಯ ಅವರು ವಾಹನ ಚಾಲನೆ ಮಾಡುತ್ತಿದ್ದರು. ಕೊಂಡಜ್ಜಿ ಮತ್ತು ಸೊಪ್ಪಿನಹಳ್ಳಿ ಗ್ರಾಮದ ಮಧ್ಯದ ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ರಾತ್ರಿಯಾದ ಕಾರಣ ನೀರಿನ ಹರಿವಿನ ಅರಿವು ತಿಳಿಯದೆ ಪುಟ್ಟಸಿದ್ದಯ್ಯ ವಾಹನವನ್ನು ನೀರಿನಲ್ಲೇ ಚಾಲನೆ ಮಾಡಿದ್ದಾರೆ. ಕೆಲ ದೂರ ಕ್ರಮಿಸಿದ ಕೂಡಲೇ ಕಾರು ನೀರಿನಲ್ಲಿ ಕೊಚ್ಚಿಹೋಗಿದೆ. ಸುಮಾರು 200 ಮೀಟರ್ ದೂರ ಕಾರು ನೀರಿನಲ್ಲಿ ಕೊಚ್ಚಿ ಹೋಗಿದೆ. ದಾರಿ ಹೋಕರು ಮತ್ತು ಗ್ರಾಮಸ್ಥರ ಸಹಕಾರದಿಂದಾಗಿ ಪುಟ್ಟಸಿದ್ದಯ್ಯ ಅವರನ್ನು ಪ್ರಾಣಾಪಾಯದಿಂದ ಬಚಾವು ಮಾಡಲಾಗಿದೆ.