ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ಕಾರಿನೊಂದಿಗೆ ಕೊಚ್ಚಿ ಹೋದ ವ್ಯಕ್ತಿ

Last Updated 3 ಆಗಸ್ಟ್ 2022, 20:56 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ಕೊಂಡಜ್ಜಿ_ ಸೊಪ್ಪಿನಹಳ್ಳಿ ಗ್ರಾಮದ ಮಧ್ಯದಲ್ಲಿರುವ ಸೇತುವೆ ಮೇಲೆ ಹರಿಯುತ್ತಿರುವ ಭಾರಿ ನೀರಿನೊಳಗೆ ಸಾಗುತ್ತಿದ್ದ ಮಾರುತಿ ವ್ಯಾನ್ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ತಿಪಟೂರು ತಾಲ್ಲೂಕಿನ ಗಡಬನಹಳ್ಳಿ ಗ್ರಾಮದ ಪುಟ್ಟಸಿದ್ದಯ್ಯ (65) ಮತ್ತು ಪಟೇಲ್ ಕುಮಾರಸ್ವಾಮಿ (68) ಎಂಬುವರು ಮದುವೆ ಕಾರ್ಯ ನಿಮ್ಮಿತ್ತ ಮಾರುತಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು.

ಪುಟ್ಟಸಿದ್ದಯ್ಯ ಅವರು ವಾಹನ ಚಾಲನೆ ಮಾಡುತ್ತಿದ್ದರು. ಕೊಂಡಜ್ಜಿ ಮತ್ತು ಸೊಪ್ಪಿನಹಳ್ಳಿ ಗ್ರಾಮದ ಮಧ್ಯದ ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ರಾತ್ರಿಯಾದ ಕಾರಣ ನೀರಿನ ಹರಿವಿನ ಅರಿವು ತಿಳಿಯದೆ ಪುಟ್ಟಸಿದ್ದಯ್ಯ ವಾಹನವನ್ನು ನೀರಿನಲ್ಲೇ ಚಾಲನೆ ಮಾಡಿದ್ದಾರೆ. ಕೆಲ ದೂರ ಕ್ರಮಿಸಿದ ಕೂಡಲೇ ಕಾರು ನೀರಿನಲ್ಲಿ ಕೊಚ್ಚಿಹೋಗಿದೆ. ಸುಮಾರು 200 ಮೀಟರ್ ದೂರ ಕಾರು ನೀರಿನಲ್ಲಿ ಕೊಚ್ಚಿ ಹೋಗಿದೆ. ದಾರಿ ಹೋಕರು ಮತ್ತು ಗ್ರಾಮಸ್ಥರ ಸಹಕಾರದಿಂದಾಗಿ ಪುಟ್ಟಸಿದ್ದಯ್ಯ ಅವರನ್ನು ಪ್ರಾಣಾಪಾಯದಿಂದ ಬಚಾವು ಮಾಡಲಾಗಿದೆ.

ಆದರೆ ಕಾರಿನೊಳಗಿದ್ದ ಪಟೇಲ್ ಕುಮಾರಸ್ವಾಮಿ ಮತ್ತು ಕಾರು ನಾಪತ್ತೆಯಾಗಿದೆ. ಕತ್ತಲಾಗಿರುವ ಕಾರಣಕ್ಕೆ ಹುಡುಕಲು ಸಾಧ್ಯವಾಗಿಲ್ಲ. ಪಟೇಲ್ ಕುಮಾರಸ್ವಾಮಿ ಯವರು ಜೀವಂತವಾಗಿದ್ದಾರೆಯೇ? ಇಲ್ಲವೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಆದರೆ ಕತ್ತಲೆಯ ಕಾರಣಕ್ಕೆ ರಕ್ಷಣಾ ಕಾರ್ಯ ಸಾಧ್ಯವಾಗುತ್ತಿಲ್ಲ ಎಂದು ಪ್ರತ್ಯಕ್ಷದರ್ಶಿ ಕೊಂಡಜ್ಜಿ ವಿಶ್ವನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT