‘ಮಾಜಿ ಶಾಸಕರು ಸೃಷ್ಟಿಸಿರುವ ಆಡಿಯೋದಲ್ಲಿ ಎಲ್ಲಿಯೂ ಶಾಸಕರ ಹೆಸರಾಗಲಿ, ಅವರ ಆಪ್ತ ಸಹಾಯಕರ ಹೆಸರು ಇಲ್ಲ. ಮಾಜಿ ಶಾಸಕರೇ ಹಾಲಿ ಶಾಸಕರ ಹೆಸರು ಹೇಳಿ ಆರೋಪ ಮಾಡಿದ್ದಾರೆ. ಬುಗುಡನಹಳ್ಳಿ ಕೆರೆ ತುಂಬಿದ ಬಳಿಕ ಮೊದಲು ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ನೀರು ಹರಿಸುವ ಬಗ್ಗೆ ಜಿಲ್ಲಾಧಿಕಾರಿ, ಹೇಮಾವತಿ ನಾಲಾ ಎಂಜಿನಿಯರ್ಗಳು ಶಾಸಕ ಗೌರಿಶಂಕರ್ ಅವರಿಗೆ ತಿಳಿಸಿದ್ದರು. ನೀರು ಬಿಟ್ಟ ತಕ್ಷಣ ನಾಗವಲ್ಲಿ ಕೆರೆಗೆ ಪೂಜೆ ಸಲ್ಲಿಸಲು ಉದ್ದೇಶಿಸಲಾಗಿತ್ತು. ಆದರೆ, ಇದ್ದಕ್ಕಿದ್ದಂತೆಯೇ ಜಿಲ್ಲಾಧಿಕಾರಿಗಳು ಕುಣಿಗಲ್ ಕೆರೆಗೆ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದರಿಂದ ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ನೀರು ಹರಿದಿಲ್ಲ ಎಂದು ವಿವರಿಸಿದರು.