ಗುಬ್ಬಿ: ನಗರದಲ್ಲಿನ ನಿರ್ಗತಿಕರು ಮತ್ತು ದೂರದ ಊರುಗಳಿಗೆ ತೆರಳಲು ಸಾಧ್ಯವಾಗದ ಕಾರ್ಮಿಕರು ಊಟ, ವಸತಿಯಿಲ್ಲದೆ ತಂತ್ರ ಸ್ಥಿತಿಗೆ ಸಿಲುಕಿ ಸಂಕಷ್ಟದಲ್ಲಿದ್ದಾರೆ. ಅಂತವರಿಗೆ ಸ್ಪಂದಿಸಿ ಎಂದು ತಹಶೀಲ್ದಾರ್ ತಿಪ್ಪೆಸ್ವಾಮಿ ಮನವಿ ಮಾಡಿದರು.
ಪಟ್ಟಣದಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ, ನೊಂದವರಿಗೆ ಊಟ ಬಡಿಸಿ ಮಾತನಾಡಿದರು.
ಅ.ನ.ಲಿಂಗಪ್ಪ ಮಾತನಾಡಿ, ಕೊರೊನಾ ಸೋಂಕು ಹರಡುವಿಕೆಯಿಂದ ಅನೇಕ ಕುಟುಂಬಗಳು ಅನ್ನ, ನೀರು, ವಸತಿ, ಬಟ್ಟೆಗೆ ಸಮಸ್ಯೆಯಾಗಿದೆ. ದಾನಿಗಳು ಮತ್ತು ಸಹೃದಯಿಗಳು ಅಂತವರಿಗೆ ತಮ್ಮ ಕೈಲಾದಷ್ಟು ಮಟ್ಟಿಗೆ ನೆರವು ನೀಡಿದಾಗ ಮಾತ್ರ ಮಾನವೀಯತೆಗೆ ಅರ್ಥ ಸಿಗುತ್ತದೆ ಎಂದು ಹೇಳಿದರು.