ವಸತಿ ಸಚಿವ ವಿ.ಸೋಮಣ್ಣ ಈಗಾಗಲೇ ಜಿಲ್ಲೆಗೆ ಅಲೆಮಾರಿ ಜನಾಂಗದವರಿಗೆ, ಕೊಳಚೆ ಪ್ರದೇಶದವರಿಗೆ ಮತ್ತು ಗ್ರಾಮ ಪಂಚಾಯ್ತಿವಾರು ಮನೆಗಳನ್ನು ಮಂಜೂರು ಮಾಡಿದ್ದಾರೆ. ಇವುಗಳ ಪಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು. ನಿವೇಶನ, ವಸತಿ ರಹಿತರ ಪ್ರಕಟಿಸಿದ ಪಟ್ಟಿಯೇ ಮೂಲಮಂತ್ರವಾಗಬೇಕು. ಕಾಲಮಿತಿಯಲ್ಲಿ ಪಲಾನುಭವಿಗಳ ಆಯ್ಕೆ ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆ ಮುಂದಿನ 100 ದಿವಸದೊಳಗೆ ಪೂರ್ಣವಾಗಬೇಕು ಎಂದು ಸೂಚಿಸಿದರು.