ಹಾಸನದ ಕೂಲಿ ಕಾರ್ಮಿಕರು ಆಂಧ್ರಪ್ರದೇಶಕ್ಕೆ ಕೂಲಿಗಾಗಿ ತೆರಳಿದ್ದರು. ಲಾಕ್ಡೌನ್ ಪರಿಣಾಮ ಅಲ್ಲಿಯೇ ನೆಲೆಗೊಂಡಿದ್ದರು. ಆದರೆ, ಆಹಾರಕ್ಕೆ ತೊಂದರೆಯಾದ ಕಾರಣ ವಾಹನವೊಂದನ್ನು ಬಾಡಿಗೆ ಪಡೆದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ಕೈಮರ ಚೆಕ್ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಬರಗೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲಕ್ಷ್ಮಿಕಾಂತ್ ವಾಹನ ಮುಂದೆ ಬಿಡಲು ಪೊಲೀಸರಿಗೆ ತಿಳಿಯದಂತೆ ₹1 ಸಾವಿರ ಹಣ ಪಡೆದಿದ್ದರು.