ತಮ್ಮ ಭಾಷಣದ ವೇಳೆ ಶಾಸಕ ಡಾ.ಎಚ್.ಡಿ.ರಂಗನಾಥ್, ‘ಹಿಂದಿನ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರವು ನನ್ನ ಕ್ಷೇತ್ರಕ್ಕೆ ₹ 720 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಈಗ ಇವೆಲ್ಲವನ್ನು ತಡೆ ಹಿಡಿದಿದ್ದು ಏಕೆ’ ಎಂದು ಪ್ರಶ್ನಿಸಿದರು. ‘ಇದು ನಿಮ್ಮ ಮನೆ ದೇವರಿರುವ ಕ್ಷೇತ್ರ. ಅಭಿವೃದ್ಧಿಗೆ ಹಣ ನೀಡಿ’ ಎಂದು ಮುಖ್ಯಮಂತ್ರಿ ಅವರಿಗೆ ಆಗ್ರಹಿಸಿದರು.