ಈ ವಾರ (ಏ.6) ಈ ಚಿತ್ರ ಬಿಡುಗಡೆಯಾಗುತ್ತಿದೆ. ನಿರ್ದೇಶಕ ಎಸ್. ಉಮೇಶ್ ಅವರ ಮಾತಿನಲ್ಲಿ ಬಹುದಿನದ ಶ್ರಮವನ್ನು ಪ್ರೇಕ್ಷಕನ ಮುಂದಿಡುತ್ತಿರುವ ಸಂಭ್ರಮಕ್ಕಿಂತ ತಂಡದ ಕಲಾವಿದರ ಮೇಲಿನ ಅಸಮಾಧಾನವೇ ಎದ್ದು ಕಾಣುತ್ತಿತ್ತು. ‘ಎಲ್ಲರೂ ಮೊದಲಿಗೆ ಚೆನ್ನಾಗಿಯೇ ಇರುತ್ತಾರೆ. ಆದರೆ ಎತ್ತರಕ್ಕೆ ಬೆಳೆದ ಮೇಲೆ ತಾವು ನಡೆದುಬಂದ ದಾರಿಯನ್ನು ಮರೆತುಬಿಡುತ್ತಾರೆ’ ಎಂಬಿತ್ಯಾದಿ ದೂರು ನೀಡುವುದಕ್ಕಾಗಿಯೇ ಹೆಚ್ಚಿನ ಶ್ರಮ, ಸಮಯ ವ್ಯಯಿಸಿದ ಉಮೇಶ್ ಅವರು ಚಿತ್ರದ ಬಗ್ಗೆ ಮಾತನಾಡಿದ್ದು ಕಡಿಮೆ.