ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2018ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಸಿದ್ದರಾಮಯ್ಯ ಸೋಲಿನ ಬಗ್ಗೆ ಯಾವುದೇ ವರದಿ ಬಂದಿರಲಿಲ್ಲ. ಅವರು ಬೇರೆ ಬೇರೆ ಕಾರಣಗಳಿಂದ ಸೋತಿದ್ದಾರೆ. ನಮ್ಮ ಪಕ್ಷದವರೇ ಸೇರಿ ಅವರನ್ನು ಸೋಲಿಸುತ್ತಾರೆ ಎನ್ನುವ ವರದಿ ಆಗ ಬಂದಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.