<p><strong>ತುಮಕೂರು</strong>: ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಸ್ಥಗಿತದ ಬಿಸಿ ಇಂದಿರಾ ಕ್ಯಾಂಟೀನ್ಗೂ ತಟ್ಟಿದ್ದು, ನಗರದ ಕ್ಯಾಂಟೀನ್ಗಳು ಮುಚ್ಚುವ ಹಂತಕ್ಕೆ ತಲುಪಿವೆ.</p>.<p>ಮಹಾನಗರ ಪಾಲಿಕೆ ಕಚೇರಿ ಪಕ್ಕದ ಮುಖ್ಯ ಕ್ಯಾಂಟೀನ್ನಲ್ಲಿ ಅಡುಗೆ ತಯಾರಿಸಿ ಕ್ಯಾತ್ಸಂದ್ರ, ಶಿರಾ ಗೇಟ್, ಮಂಡಿಪೇಟೆ, ಜಿಲ್ಲಾ ಆಸ್ಪತ್ರೆ ಮತ್ತು ಅಂತರಸನಹಳ್ಳಿ ಮಾರುಕಟ್ಟೆಯ ಇಂದಿರಾ ಕ್ಯಾಂಟೀನ್ಗಳಿಗೆ ಊಟ, ತಿಂಡಿ ಸರಬರಾಜು ಮಾಡಲಾಗುತ್ತಿದೆ. ಕ್ಯಾಂಟೀನ್ಗೆ ಗುರುವಾರ ಅನಿಲ ಸಿಲಿಂಡರ್ ಬಂದಿಲ್ಲ. ಹೀಗಾಗಿ ಶುಕ್ರವಾರದಿಂದ ಕ್ಯಾಂಟೀನ್ ಬಾಗಿಲು ತೆರೆಯುವುದು ಅನುಮಾನ.</p>.<p>ತಿಂಡಿ, ಊಟ ತಯಾರಿಗೆ ದಿನಕ್ಕೆ 1ರಿಂದ 2 ಸಿಲಿಂಡರ್ ಬೇಕಾಗುತ್ತದೆ. ಎಸ್.ಎಸ್.ಪುರಂ ಏಜೆನ್ಸಿ ಕಡೆಯಿಂದ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಗುರುವಾರದಿಂದಲೇ ಸಿಲಿಂಡರ್ ಕೊಡುವುದನ್ನು ನಿಲ್ಲಿಸಲಾಗಿದೆ. ಇದರಿಂದ ಕ್ಯಾಂಟೀನ್ ಗುತ್ತಿಗೆ ಪಡೆದವರು ಸಿಲಿಂಡರ್ಗಾಗಿ ಎಲ್ಲೆಡೆ ಹುಡುಕಾಡುತ್ತಿದ್ದಾರೆ.</p>.<p>‘ಶುಕ್ರವಾರ ಜನರಿಗೆ ಊಟ, ತಿಂಡಿ ನೀಡುವ ಉದ್ದೇಶದಿಂದ ಒಂದು ಸಿಲಿಂಡರ್ ನೀಡುವಂತೆ ಬೇರೆಯವರನ್ನು ಕೇಳಿದ್ದೇವೆ. ಸಿಕ್ಕಿದರೆ ಕ್ಯಾಂಟೀನ್ ನಡೆಸುತ್ತೇವೆ, ಇಲ್ಲದಿದ್ದರೆ ಬಾಗಿಲು ಹಾಕಬೇಕಾಗುತ್ತದೆ’ ಎಂದು ಕ್ಯಾಂಟೀನ್ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದರು.</p>.<p>ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಕೊರತೆಯಿಂದ ಹೋಟೆಲ್ಗಳಲ್ಲಿ ವಿದ್ಯುತ್ ಚಾಲಿತ ಕುಕ್ಕರ್ ಬಳಕೆ ಹೆಚ್ಚಾಗಿದೆ. ದೋಸೆ ಇತರೆ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ.</p>.<p>ನಗರದ ರೈಲು ನಿಲ್ದಾಣದ ರಸ್ತೆಯಲ್ಲಿರುವ ಸಮೃದ್ಧಿ ಗ್ರ್ಯಾಂಡ್ ಹೋಟೆಲ್ ದೋಸೆಗೆ ಹೆಸರುವಾಸಿ. ದೋಸೆ ಪ್ರಿಯರು ಹೆಚ್ಚಾಗಿ ಹೋಟೆಲ್ ಮೊರೆ ಹೋಗುತ್ತಾರೆ. ಹೋಟೆಲ್ನಲ್ಲಿ ದೋಸೆ ತಯಾರಿ ಕಡಿಮೆ ಮಾಡಲಾಗಿದೆ. ಈ ಹಿಂದೆ ರಾತ್ರಿ 10 ಗಂಟೆಯ ತನಕ ದೋಸೆ ಸಿಗುತ್ತಿತ್ತು. ಈಗ ಅದನ್ನು ಬೆಳಿಗ್ಗೆ 10ರ ವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ.</p>.<p>‘ಹೋಟೆಲ್ಗೆ ಒಂದು ದಿನಕ್ಕೆ 2ರಿಂದ 3 ಸಿಲಿಂಡರ್ ಅವಶ್ಯಕತೆ ಇದೆ. ಇವತ್ತು ಹೋಟೆಲ್ ತೆರೆದಿದ್ದೇವೆ. ನಾಳೆಗೆ ಒಂದೂ ಸಿಲಿಂಡರ್ ಇಲ್ಲ. ಅನಿಲ ಪೂರೈಕೆ ಸಂಪೂರ್ಣವಾಗಿ ನಿಂತು ಹೋದರೆ ನಾಳೆಯೇ ಹೋಟೆಲ್ ಬಂದ್ ಮಾಡಬೇಕಾಗುತ್ತದೆ’ ಎಂದು ಸಮೃದ್ಧಿ ಗ್ರ್ಯಾಂಡ್ ಹೋಟೆಲ್ ಮ್ಯಾನೇಜರ್ ಪ್ರತಿಕ್ರಿಯಿಸಿದರು.</p>.<p><strong>ಸಿಎನ್ಜಿ ಇಂಧನ ದರ ವ್ಯತ್ಯಾಸ</strong></p><p> ನಗರದ ಹಲವು ಬಂಕ್ಗಳಲ್ಲಿ ಸಿಎನ್ಜಿ ಇಂಧನದ ದರ ಜಾಸ್ತಿಯಾಗಿದೆ. ಇದರಿಂದ ಆಟೊ ಚಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಒಂದು ಬಂಕ್ನಲ್ಲಿ ಪ್ರತಿ ಲೀಟರ್ ಸಿಎನ್ಜಿ ಇಂಧನಕ್ಕೆ ₹75 ತೆಗೆದುಕೊಂಡರೆ ಮತ್ತೊಂದು ಕಡೆ ₹89 ಇನ್ನೊಂದು ಕಡೆ ಬಂಕ್ನಲ್ಲಿ ₹69 ನಿಗದಿಪಡಿಸಲಾಗಿದೆ ಎಂದು ಆಟೊ ಚಾಲಕರು ಆರೋಪಿಸಿದ್ದಾರೆ. ಇಂಧನ ದರ ನಿರ್ಧರಿಸುವವರು ಯಾರು ಎಂಬ ಬಗ್ಗೆ ಗೊಂದಲ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಬಂಕ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ದರ ಪಟ್ಟಿ ಪ್ರದರ್ಶಿಸುವಂತೆ ಮಾಲೀಕರಿಗೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಸ್ಥಗಿತದ ಬಿಸಿ ಇಂದಿರಾ ಕ್ಯಾಂಟೀನ್ಗೂ ತಟ್ಟಿದ್ದು, ನಗರದ ಕ್ಯಾಂಟೀನ್ಗಳು ಮುಚ್ಚುವ ಹಂತಕ್ಕೆ ತಲುಪಿವೆ.</p>.<p>ಮಹಾನಗರ ಪಾಲಿಕೆ ಕಚೇರಿ ಪಕ್ಕದ ಮುಖ್ಯ ಕ್ಯಾಂಟೀನ್ನಲ್ಲಿ ಅಡುಗೆ ತಯಾರಿಸಿ ಕ್ಯಾತ್ಸಂದ್ರ, ಶಿರಾ ಗೇಟ್, ಮಂಡಿಪೇಟೆ, ಜಿಲ್ಲಾ ಆಸ್ಪತ್ರೆ ಮತ್ತು ಅಂತರಸನಹಳ್ಳಿ ಮಾರುಕಟ್ಟೆಯ ಇಂದಿರಾ ಕ್ಯಾಂಟೀನ್ಗಳಿಗೆ ಊಟ, ತಿಂಡಿ ಸರಬರಾಜು ಮಾಡಲಾಗುತ್ತಿದೆ. ಕ್ಯಾಂಟೀನ್ಗೆ ಗುರುವಾರ ಅನಿಲ ಸಿಲಿಂಡರ್ ಬಂದಿಲ್ಲ. ಹೀಗಾಗಿ ಶುಕ್ರವಾರದಿಂದ ಕ್ಯಾಂಟೀನ್ ಬಾಗಿಲು ತೆರೆಯುವುದು ಅನುಮಾನ.</p>.<p>ತಿಂಡಿ, ಊಟ ತಯಾರಿಗೆ ದಿನಕ್ಕೆ 1ರಿಂದ 2 ಸಿಲಿಂಡರ್ ಬೇಕಾಗುತ್ತದೆ. ಎಸ್.ಎಸ್.ಪುರಂ ಏಜೆನ್ಸಿ ಕಡೆಯಿಂದ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಗುರುವಾರದಿಂದಲೇ ಸಿಲಿಂಡರ್ ಕೊಡುವುದನ್ನು ನಿಲ್ಲಿಸಲಾಗಿದೆ. ಇದರಿಂದ ಕ್ಯಾಂಟೀನ್ ಗುತ್ತಿಗೆ ಪಡೆದವರು ಸಿಲಿಂಡರ್ಗಾಗಿ ಎಲ್ಲೆಡೆ ಹುಡುಕಾಡುತ್ತಿದ್ದಾರೆ.</p>.<p>‘ಶುಕ್ರವಾರ ಜನರಿಗೆ ಊಟ, ತಿಂಡಿ ನೀಡುವ ಉದ್ದೇಶದಿಂದ ಒಂದು ಸಿಲಿಂಡರ್ ನೀಡುವಂತೆ ಬೇರೆಯವರನ್ನು ಕೇಳಿದ್ದೇವೆ. ಸಿಕ್ಕಿದರೆ ಕ್ಯಾಂಟೀನ್ ನಡೆಸುತ್ತೇವೆ, ಇಲ್ಲದಿದ್ದರೆ ಬಾಗಿಲು ಹಾಕಬೇಕಾಗುತ್ತದೆ’ ಎಂದು ಕ್ಯಾಂಟೀನ್ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿದರು.</p>.<p>ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಕೊರತೆಯಿಂದ ಹೋಟೆಲ್ಗಳಲ್ಲಿ ವಿದ್ಯುತ್ ಚಾಲಿತ ಕುಕ್ಕರ್ ಬಳಕೆ ಹೆಚ್ಚಾಗಿದೆ. ದೋಸೆ ಇತರೆ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ.</p>.<p>ನಗರದ ರೈಲು ನಿಲ್ದಾಣದ ರಸ್ತೆಯಲ್ಲಿರುವ ಸಮೃದ್ಧಿ ಗ್ರ್ಯಾಂಡ್ ಹೋಟೆಲ್ ದೋಸೆಗೆ ಹೆಸರುವಾಸಿ. ದೋಸೆ ಪ್ರಿಯರು ಹೆಚ್ಚಾಗಿ ಹೋಟೆಲ್ ಮೊರೆ ಹೋಗುತ್ತಾರೆ. ಹೋಟೆಲ್ನಲ್ಲಿ ದೋಸೆ ತಯಾರಿ ಕಡಿಮೆ ಮಾಡಲಾಗಿದೆ. ಈ ಹಿಂದೆ ರಾತ್ರಿ 10 ಗಂಟೆಯ ತನಕ ದೋಸೆ ಸಿಗುತ್ತಿತ್ತು. ಈಗ ಅದನ್ನು ಬೆಳಿಗ್ಗೆ 10ರ ವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ.</p>.<p>‘ಹೋಟೆಲ್ಗೆ ಒಂದು ದಿನಕ್ಕೆ 2ರಿಂದ 3 ಸಿಲಿಂಡರ್ ಅವಶ್ಯಕತೆ ಇದೆ. ಇವತ್ತು ಹೋಟೆಲ್ ತೆರೆದಿದ್ದೇವೆ. ನಾಳೆಗೆ ಒಂದೂ ಸಿಲಿಂಡರ್ ಇಲ್ಲ. ಅನಿಲ ಪೂರೈಕೆ ಸಂಪೂರ್ಣವಾಗಿ ನಿಂತು ಹೋದರೆ ನಾಳೆಯೇ ಹೋಟೆಲ್ ಬಂದ್ ಮಾಡಬೇಕಾಗುತ್ತದೆ’ ಎಂದು ಸಮೃದ್ಧಿ ಗ್ರ್ಯಾಂಡ್ ಹೋಟೆಲ್ ಮ್ಯಾನೇಜರ್ ಪ್ರತಿಕ್ರಿಯಿಸಿದರು.</p>.<p><strong>ಸಿಎನ್ಜಿ ಇಂಧನ ದರ ವ್ಯತ್ಯಾಸ</strong></p><p> ನಗರದ ಹಲವು ಬಂಕ್ಗಳಲ್ಲಿ ಸಿಎನ್ಜಿ ಇಂಧನದ ದರ ಜಾಸ್ತಿಯಾಗಿದೆ. ಇದರಿಂದ ಆಟೊ ಚಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಒಂದು ಬಂಕ್ನಲ್ಲಿ ಪ್ರತಿ ಲೀಟರ್ ಸಿಎನ್ಜಿ ಇಂಧನಕ್ಕೆ ₹75 ತೆಗೆದುಕೊಂಡರೆ ಮತ್ತೊಂದು ಕಡೆ ₹89 ಇನ್ನೊಂದು ಕಡೆ ಬಂಕ್ನಲ್ಲಿ ₹69 ನಿಗದಿಪಡಿಸಲಾಗಿದೆ ಎಂದು ಆಟೊ ಚಾಲಕರು ಆರೋಪಿಸಿದ್ದಾರೆ. ಇಂಧನ ದರ ನಿರ್ಧರಿಸುವವರು ಯಾರು ಎಂಬ ಬಗ್ಗೆ ಗೊಂದಲ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಬಂಕ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ದರ ಪಟ್ಟಿ ಪ್ರದರ್ಶಿಸುವಂತೆ ಮಾಲೀಕರಿಗೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>