ತುಮಕೂರು: ಕಾಂಗ್ರೆಸ್ ಮುಖಂಡಡಾ.ಜಿ.ಪರಮೇಶ್ವರ ಅವರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವ್ಯವಹಾರಕ್ಜೆ ಸಂಬಂಧಿಸಿದಂತೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ಖಂಡಿಸಿ ಶನಿವಾರ ಪರಮೇಶ್ವರ ಅವರ ಕ್ಷೇತ್ರ ಕೊರಟಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ದಿಕ್ಕಾರ ಕೂಗಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಡಿಕಲ್ ಅಶ್ವತ್, ಅರಕೆರೆ ಶಂಕರ್, ಮುಖಂಡರಾದ ಕೆ.ಆರ್.ಓಬಳರಾಜು, ಕೆ.ವಿ.ಮಂಜುನಾಥ್, ತುಂಬಾಡಿ ರಾಮಚಂದ್ರಪ್ಪ, ನರಸಿಂಹಪ್ಪ, ಜಿ. ವೆಂಕಟಚಲಯ್ಯ, ಅನಿಲ್ ಕುಮಾರ್ ಪಾಟೀಲ್ ಇತರರು ಇದ್ದರು.