ಮಧುಗಿರಿ ತಾಲ್ಲೂಕು ಪುರವರ ಹೋಬಳಿಯ ಚನ್ನಸಾಗರ, ಹನುಮಂತಪುರ, ಹಂದ್ರಾಳು, ತಗ್ಗಿಹಳ್ಳಿ, ಗಿಡ್ಡಯ್ಯನಪಾಳ್ಯ, ಸಂಕಾಪುರ, ವೀರನಾಗೇನಹಳ್ಳಿ, ಕೊಡಿಗೇನಹಳ್ಳಿ ಹೋಬಳಿಯ ವೀರಾಪುರ, ಕಾಳೇನಹಳ್ಳಿ, ರೆಡ್ಡಿಹಳ್ಳಿ ರಸ್ತೆ ಬದಿಯಲ್ಲಿರುವ ಮತ್ತು ನದಿ ದಡದಲ್ಲಿರುವ ಜಮೀನು, ಮನೆಗಳು ನೀರಿನಿಂದ ಜಲಾವೃತವಾಗಿವೆ. ಮುಖ್ಯವಾಗಿ ಗೌರಿಬಿದನೂರು- ಮಧುಗಿರಿ ಮುಖ್ಯ ರಸ್ತೆ, ಕಾಳೇನಹಳ್ಳಿ- ವೀರಾಪುರ, ರೆಡ್ಡಿಹಳ್ಳಿ ಮಾರ್ಗದ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.