‘ನಾನು ರಾಜ್ಯಸಭೆಗೆ ಆಯ್ಕೆ ಆದಾಗ ನನಗೆ ಯಾವುದೇ ಒಂದು ಕ್ಷೇತ್ರ ಇರಲಿಲ್ಲ. ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಪೂರ್ವ ಭಾಗದಿಂದ ಈಶಾನ್ಯ ರಾಜ್ಯಗಳವರೆಗೆ ನನ್ನ ಕ್ಷೇತ್ರ ವ್ಯಾಪ್ತಿ ಇತ್ತು. ನಾನು ರಾಜ್ಯಸಭೆ ಸದಸ್ಯೆಯಾದ ಮೇಲೆ ಸಾಕಷ್ಟು ಕಲಿತೆ. ಹಲವು ಮಂದಿ ಪಂಡಿತರು, ಪ್ರಶಸ್ತಿ ಪುರಸ್ಕೃತರನ್ನು ಭೇಟಿಯಾದೆ. ಇದರಿಂದ ನನಗೆ ಉತ್ತಮ ಸಂಪರ್ಕ ಬೆಳೆಯಿತು. ಸಂತೋಷವೂ ಆಯಿತು’ ಎಂದು ತಿಳಿದರು.