ಸ್ನೇಹಕ್ಕಿಂತ ಪಕ್ಷ ಮುಖ್ಯ: ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಅವರ ತಂದೆ ಕಾಂಗ್ರೆಸ್ನಲ್ಲಿ ಇದ್ದಾಗಿನಿಂದಲೂ ರಾಜೇಶ್ ಗೌಡ ಹಾಗೂ ನಾನು ಸ್ನೇಹಿತರು. ಅವರೊಂದಿಗೆ ಈಗ ಯಾವುದೇ ವ್ಯವಹಾರವಿಲ್ಲ. ಸ್ನೇಹಕ್ಕಾಗಿ ಪಕ್ಷದ ತತ್ವ, ಸಿದ್ಧಾಂತ ಬಿಡುವ
ಪ್ರಶ್ನೆಯೇ ಇಲ್ಲ. ನಮಗೆ ಪಕ್ಷ ನಿಷ್ಠೆಯೇ ಮುಖ್ಯ. ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ
ಮಾಡುವುದಾಗಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಗೋಷ್ಠಿಯಲ್ಲಿ ತಿಳಿಸಿದರು.