<p>ಕಲ್ಲೂರು (ಗುಬ್ಬಿ): ಗುಬ್ಬಿ ತಾಲ್ಲೂಕು ಕಡಬ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ಗುರುವಾರ ಗಂಗಾಮತ ಬೆಸ್ತರ ಸುಮುದಾಯದ ವತಿಯಿಂದ ಗಂಗಾ ಸಪ್ತಮಿ ಆಚರಿಸಲಾಯಿತು.</p>.<p>ಗಂಗಾಪರಮೇಶ್ವರಿ ಚಿತ್ರ ಇಟ್ಟು, ಹಸಿರು ಚಪ್ಪರ ಹಾಕಿ ಸಮುದಾಯದ ಸಂಕೇತವಾದ ಮೀನಿನ ಬಲೆ ಹಾಗೂ ಮೀನುಗಳಿಂದ ಮಾಡಿದ ಹಾರಗಳಿಂದ ಚಪ್ಪರವನ್ನು ಅಲಂಕರಿಸಲಾಗಿತ್ತು.</p>.<p>ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ್, ಅನೇಕ ತಲೆಮಾರುಗಳಿಂದ ಗಂಗೆಯನ್ನು ನಂಬಿ ಬದುಕು ಕಟ್ಟಿಕೊಂಡಿರುವ ಗಂಗಾಮತಸ್ಥರು ಗಂಗಾಪರಮೇಶ್ವರಿಯನ್ನು ಆರಾಧಿಸಬೇಕು ಎಂದರು.</p>.<p>ವೆಂಕಟೇಶ್. ಕೆ. ಟಿ ಮಾತನಾಡಿ, ಕ್ಷಮೆಗೆ ಮತ್ತೊಂದು ಹೆಸರು ಗಂಗಾಮಾತೆ. ಸಮುದಾಯದವರು ಒಗ್ಗಟ್ಟಿನಿಂದ ಇದ್ದಲ್ಲಿ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.</p>.<p>ಈ ಕಾರ್ಯಕ್ರಮದಲ್ಲಿ ಮುಖಂಡ ಚೆನ್ನಮಲ್ಲಯ್ಯ, ಅರುಣ್ ಕುಮಾರ್ ಶಿವಣ್ಣ, ತಾತಯ್ಯ, ನಾಗರಾಜ್, ದಯಾನಂದ, ಸುರೇಶ್, ಅಶೋಕ್, ಪಾಂಡು, ಮುದ್ರೆ ಲಕ್ಷ್ಮಣಪ್ಪ, ಹೋಟೆಲ್ ಶಿವರಾಜು, ರತ್ನಮ್ಮ, ಸುಶ್ಮಿತ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260424-17-1784427332</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲ್ಲೂರು (ಗುಬ್ಬಿ): ಗುಬ್ಬಿ ತಾಲ್ಲೂಕು ಕಡಬ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ಗುರುವಾರ ಗಂಗಾಮತ ಬೆಸ್ತರ ಸುಮುದಾಯದ ವತಿಯಿಂದ ಗಂಗಾ ಸಪ್ತಮಿ ಆಚರಿಸಲಾಯಿತು.</p>.<p>ಗಂಗಾಪರಮೇಶ್ವರಿ ಚಿತ್ರ ಇಟ್ಟು, ಹಸಿರು ಚಪ್ಪರ ಹಾಕಿ ಸಮುದಾಯದ ಸಂಕೇತವಾದ ಮೀನಿನ ಬಲೆ ಹಾಗೂ ಮೀನುಗಳಿಂದ ಮಾಡಿದ ಹಾರಗಳಿಂದ ಚಪ್ಪರವನ್ನು ಅಲಂಕರಿಸಲಾಗಿತ್ತು.</p>.<p>ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ್, ಅನೇಕ ತಲೆಮಾರುಗಳಿಂದ ಗಂಗೆಯನ್ನು ನಂಬಿ ಬದುಕು ಕಟ್ಟಿಕೊಂಡಿರುವ ಗಂಗಾಮತಸ್ಥರು ಗಂಗಾಪರಮೇಶ್ವರಿಯನ್ನು ಆರಾಧಿಸಬೇಕು ಎಂದರು.</p>.<p>ವೆಂಕಟೇಶ್. ಕೆ. ಟಿ ಮಾತನಾಡಿ, ಕ್ಷಮೆಗೆ ಮತ್ತೊಂದು ಹೆಸರು ಗಂಗಾಮಾತೆ. ಸಮುದಾಯದವರು ಒಗ್ಗಟ್ಟಿನಿಂದ ಇದ್ದಲ್ಲಿ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.</p>.<p>ಈ ಕಾರ್ಯಕ್ರಮದಲ್ಲಿ ಮುಖಂಡ ಚೆನ್ನಮಲ್ಲಯ್ಯ, ಅರುಣ್ ಕುಮಾರ್ ಶಿವಣ್ಣ, ತಾತಯ್ಯ, ನಾಗರಾಜ್, ದಯಾನಂದ, ಸುರೇಶ್, ಅಶೋಕ್, ಪಾಂಡು, ಮುದ್ರೆ ಲಕ್ಷ್ಮಣಪ್ಪ, ಹೋಟೆಲ್ ಶಿವರಾಜು, ರತ್ನಮ್ಮ, ಸುಶ್ಮಿತ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260424-17-1784427332</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>