ಸಿದ್ಧಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆಗ ತ್ಯಾಗ ಮಾಡಿದ್ದೇವೆ. ಈಗ ದೊಡ್ಡ ಖಾತೆಯೇ ಬೇಕು ಎಂದು ಕೇಳುವುದು ತಪ್ಪು. ಬಿಜೆಪಿಗೆ ನಮ್ಮಗಳ ಕೊಡುಗೆ ಏನೂ ಇಲ್ಲ. ನಾವಿದ್ದ ಪಕ್ಷಕ್ಕೆ ರಾಜೀನಾಮೆ ನೀಡಿ, ಇಲ್ಲಿಗೆ ಬಂದಿದ್ದೇವೆ. ನಂತರ ಶಾಸಕರನ್ನು ಮಾಡಿ, ಈಗ ಸಚಿವ ಸ್ಥಾನ ಕೊಟ್ಟಿದ್ದಾರೆ. ಬಂದ ತಕ್ಷಣ ದೊಡ್ಡ ಹುದ್ದೆ ಕೇಳುವುದು ಸರಿಯಲ್ಲ’ ಎಂದು ಹೇಳಿದರು.