ಸಾವಿಗೂ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ಅವರ ಹೆಸರು ಇದೆ ಎಂಬ ಕಾರಣಕ್ಕೆ ಬಂಧಿಸಬೇಕಾಗಿಲ್ಲ. ಮೊದಲು ರಾಜೀನಾಮೆ ಕೊಟ್ಟು, ಪ್ರಾಥಮಿಕ ತನಿಖೆ ನಡೆಯಲಿ. ಸತ್ಯಾಂಶ ಕಂಡುಬಂದರೆ ಬಂಧಿಸಲಿ. ಈ ಘಟನೆ ಸಾರ್ವಜನಿಕ ಜೀವನದಲ್ಲಿ ಇರುವ ನಮ್ಮಂತಹವರು ತಲೆ ತಗ್ಗಿಸುವ ವಿಚಾರ. ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಎಲ್ಲರಿಗೂ ಮುಜುಗರ ತರುವಂತಹುದು’ ಎಂದು ಹೇಳಿದರು.