<p>ಕೊಡಿಗೇನಹಳ್ಳಿ: ಹೋಬಳಿಯಾದ್ಯಂತ ಬಿಸಿಲಿನ ತಾಪಮಾನ ಸುಮಾರು 38 ಡಿಗ್ರಿಯಷ್ಟು ಇದೆ. ಜನ ಮರದ ನೆರಳು, ಫ್ಯಾನ್ ಹಾಗೂ ತಂಪು ಪಾನೀಯಗಳ ಮೊರೆ ಹೋಗಿದ್ದರೆ, ಶಾಲಾ-ಕಾಲೇಜು ರಜೆ ಇರುವುದರಿಂದ ಹುಡುಗರು ನೀರಿನ ತೊಟ್ಟಿ ಹಾಗೂ ಕೃಷಿ ಹೊಂಡಗಳಲ್ಲಿ ಈಜಾಡಿ ದಣಿವಾರಿಸಿಕೊಳ್ಳುತ್ತಿದ್ದಾರೆ.</p>.<p>ಕೊಡಿಗೇನಹಳ್ಳಿ ಹಾಗೂ ಐಡಿಹಳ್ಳಿ ಹೋಬಳಿಗಳು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿದೆ. ಇಲ್ಲಿ ತಾಪಮಾನ ಹೆಚ್ಚಿದೆ. ಪ್ರತಿವರ್ಷ ಯುಗಾದಿ ಹಬ್ಬದ ಹಿಂದು-ಮುಂದೆ ಮಳೆ ಬೀಳುತ್ತಿತ್ತು. ಮರ-ಗಿಡಗಳಲ್ಲಿ ಎಲೆ ಉದುರಿ ಚಿಗುರೊಡೆಯುತ್ತಿದ್ದರಿಂದ ಸೆಖೆ ಇದ್ದರೂ ಕೂಡ ಸ್ವಲ್ಪ ಗಾಳಿ ಬರುತ್ತಿದ್ದರಿಂದ ಜನರು ತೊಂದರೆ ಆಗುತ್ತಿರಲಿಲ್ಲ.</p>.<p>ಕೆಲಸದ ಒತ್ತಡ ಮತ್ತು ಹೊರಗಡೆ ಹೋಗಬೇಕಾದ ಸಂದರ್ಭದಲ್ಲಿ ತಂಪು ಪಾನೀಯ, ಮಜ್ಜಿಗೆ, ಎಳನೀರಿಗೆ ಮುಗಿಬೀಳುವಂತಾಗಿದೆ. ನಾವು ಪ್ರಕೃತಿಯನ್ನು ದೂಷಿಸುವ ಬದಲು ಮರಳು, ನದಿ, ಕೆರೆ-ಕುಂಟೆ ಒತ್ತುವರಿ ಜತೆಗೆ ಮರಗಿಡಗಳ ನಾಶ ಮಾಡುತ್ತಿರುವುದರ ಬಗ್ಗೆ ಮೊದಲು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎನ್ನುತ್ತಾರೆ ರೆಡ್ಡಿಹಳ್ಳಿ ರಸ್ತೆಯಲ್ಲಿನ ಜೂಲಪ್ಪ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-18-990220975</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಡಿಗೇನಹಳ್ಳಿ: ಹೋಬಳಿಯಾದ್ಯಂತ ಬಿಸಿಲಿನ ತಾಪಮಾನ ಸುಮಾರು 38 ಡಿಗ್ರಿಯಷ್ಟು ಇದೆ. ಜನ ಮರದ ನೆರಳು, ಫ್ಯಾನ್ ಹಾಗೂ ತಂಪು ಪಾನೀಯಗಳ ಮೊರೆ ಹೋಗಿದ್ದರೆ, ಶಾಲಾ-ಕಾಲೇಜು ರಜೆ ಇರುವುದರಿಂದ ಹುಡುಗರು ನೀರಿನ ತೊಟ್ಟಿ ಹಾಗೂ ಕೃಷಿ ಹೊಂಡಗಳಲ್ಲಿ ಈಜಾಡಿ ದಣಿವಾರಿಸಿಕೊಳ್ಳುತ್ತಿದ್ದಾರೆ.</p>.<p>ಕೊಡಿಗೇನಹಳ್ಳಿ ಹಾಗೂ ಐಡಿಹಳ್ಳಿ ಹೋಬಳಿಗಳು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿದೆ. ಇಲ್ಲಿ ತಾಪಮಾನ ಹೆಚ್ಚಿದೆ. ಪ್ರತಿವರ್ಷ ಯುಗಾದಿ ಹಬ್ಬದ ಹಿಂದು-ಮುಂದೆ ಮಳೆ ಬೀಳುತ್ತಿತ್ತು. ಮರ-ಗಿಡಗಳಲ್ಲಿ ಎಲೆ ಉದುರಿ ಚಿಗುರೊಡೆಯುತ್ತಿದ್ದರಿಂದ ಸೆಖೆ ಇದ್ದರೂ ಕೂಡ ಸ್ವಲ್ಪ ಗಾಳಿ ಬರುತ್ತಿದ್ದರಿಂದ ಜನರು ತೊಂದರೆ ಆಗುತ್ತಿರಲಿಲ್ಲ.</p>.<p>ಕೆಲಸದ ಒತ್ತಡ ಮತ್ತು ಹೊರಗಡೆ ಹೋಗಬೇಕಾದ ಸಂದರ್ಭದಲ್ಲಿ ತಂಪು ಪಾನೀಯ, ಮಜ್ಜಿಗೆ, ಎಳನೀರಿಗೆ ಮುಗಿಬೀಳುವಂತಾಗಿದೆ. ನಾವು ಪ್ರಕೃತಿಯನ್ನು ದೂಷಿಸುವ ಬದಲು ಮರಳು, ನದಿ, ಕೆರೆ-ಕುಂಟೆ ಒತ್ತುವರಿ ಜತೆಗೆ ಮರಗಿಡಗಳ ನಾಶ ಮಾಡುತ್ತಿರುವುದರ ಬಗ್ಗೆ ಮೊದಲು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎನ್ನುತ್ತಾರೆ ರೆಡ್ಡಿಹಳ್ಳಿ ರಸ್ತೆಯಲ್ಲಿನ ಜೂಲಪ್ಪ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-18-990220975</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>