<p><strong>ಕೊಡಿಗೇನಹಳ್ಳಿ</strong>: ಹೋಬಳಿಯ ವೆಂಗಳಮ್ಮನಹಳ್ಳಿಯಲ್ಲಿ ಗುರುವಾರ ರಾತ್ರಿ ಬೀಸಿದ ಗಾಳಿ ಮತ್ತು ಮಳೆಗೆ ಐದು ವಿದ್ಯುತ್ ಕಂಬ ಹಾಗೂ ಒಂದು ಬೇವಿನ ಮರ ನೆಲಕ್ಕುರುಳಿವೆ.</p>.<p>ಈ ಭಾಗದಲ್ಲಿ ಇದುವರೆಗೂ ಮಳೆ ಬೀಳದೆ ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದರು. ಕೊಳವೆ ಬಾವಿಗಳು ಬತ್ತಿದ್ದವು. ಪೂರ್ವ ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ಕೊಡಿಗೇನಹಳ್ಳಿ ಭಾಗದಲ್ಲಿ ಗುರುವಾರ ರಾತ್ರಿ ಹದ ಮಳೆಯಾಗಿದೆ ಎನ್ನುತ್ತಾರೆ ಕಸಿನಾಯಕಹಳ್ಳಿ ಗ್ರಾಮದ ಸುನೀಲ್.</p>.<p>ಕೃಷಿ ಚಟುವಟಿಕೆಗೆ ಅನುಕೂಲ: ಏಪ್ರಿಲ್-ಮೇ ವೇಳೆಗೆ ಪೂರ್ವ ಮುಂಗಾರು ಬೀಳುತ್ತಿದ್ದರಿಂದ ಈ ಭಾಗದಲ್ಲಿನ ಬಹುತೇಕ ಕೃಷಿ ಭೂಮಿಯನ್ನು ಎರಡೆರೆಡು ಬಾರಿ ಹುಕ್ಕೆ ಮಾಡಿಸುತ್ತಿದ್ದರು. ಆದರೆ ಈ ಬಾರಿ ಇದುವರೆಗೂ ಮಳೆಯಿಲ್ಲದೆ ಗುರುವಾರ ರಾತ್ರಿ ಹದ ಮಳೆಯಾಗಿರುವುದರಿಂದ ಇನ್ನು ಕೃಷಿ ಚಟುವಟಿಕೆ ಆರಂಭಿಸಿ ಜಮೀನನ್ನು ಹದ ಮಾಡಿಕೊಳ್ಳಲು ಕೃಷಿ ಆರಂಭಿಸಬೇಕಿದೆ ಎನ್ನುತ್ತಾರೆ ಇಲ್ಲಿನ ರೈತರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-17-2001671663</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಡಿಗೇನಹಳ್ಳಿ</strong>: ಹೋಬಳಿಯ ವೆಂಗಳಮ್ಮನಹಳ್ಳಿಯಲ್ಲಿ ಗುರುವಾರ ರಾತ್ರಿ ಬೀಸಿದ ಗಾಳಿ ಮತ್ತು ಮಳೆಗೆ ಐದು ವಿದ್ಯುತ್ ಕಂಬ ಹಾಗೂ ಒಂದು ಬೇವಿನ ಮರ ನೆಲಕ್ಕುರುಳಿವೆ.</p>.<p>ಈ ಭಾಗದಲ್ಲಿ ಇದುವರೆಗೂ ಮಳೆ ಬೀಳದೆ ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದರು. ಕೊಳವೆ ಬಾವಿಗಳು ಬತ್ತಿದ್ದವು. ಪೂರ್ವ ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ಕೊಡಿಗೇನಹಳ್ಳಿ ಭಾಗದಲ್ಲಿ ಗುರುವಾರ ರಾತ್ರಿ ಹದ ಮಳೆಯಾಗಿದೆ ಎನ್ನುತ್ತಾರೆ ಕಸಿನಾಯಕಹಳ್ಳಿ ಗ್ರಾಮದ ಸುನೀಲ್.</p>.<p>ಕೃಷಿ ಚಟುವಟಿಕೆಗೆ ಅನುಕೂಲ: ಏಪ್ರಿಲ್-ಮೇ ವೇಳೆಗೆ ಪೂರ್ವ ಮುಂಗಾರು ಬೀಳುತ್ತಿದ್ದರಿಂದ ಈ ಭಾಗದಲ್ಲಿನ ಬಹುತೇಕ ಕೃಷಿ ಭೂಮಿಯನ್ನು ಎರಡೆರೆಡು ಬಾರಿ ಹುಕ್ಕೆ ಮಾಡಿಸುತ್ತಿದ್ದರು. ಆದರೆ ಈ ಬಾರಿ ಇದುವರೆಗೂ ಮಳೆಯಿಲ್ಲದೆ ಗುರುವಾರ ರಾತ್ರಿ ಹದ ಮಳೆಯಾಗಿರುವುದರಿಂದ ಇನ್ನು ಕೃಷಿ ಚಟುವಟಿಕೆ ಆರಂಭಿಸಿ ಜಮೀನನ್ನು ಹದ ಮಾಡಿಕೊಳ್ಳಲು ಕೃಷಿ ಆರಂಭಿಸಬೇಕಿದೆ ಎನ್ನುತ್ತಾರೆ ಇಲ್ಲಿನ ರೈತರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-17-2001671663</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>