ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಸಣ್ಣೇನಹಳ್ಳಿ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ನೂತನ ದೇವಾಲಯದ ಉದ್ಘಾಟನೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಶಿಖರ ಕಳಸ ಮಹೋತ್ಸವವು ನ. 15ರಂದು ವಿಜೃಂಭಣೆಯಿಂದ ನೆರವೇರಲಿದೆ.
ನ. 14ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಗಂಗಾಪೂಜೆ ಮೂಲಕ ದೇವಾತಾ ಕಾರ್ಯಗಳು ಪ್ರಾರಂಭವಾಗಲಿವೆ. ಕೊಲ್ಲಾಪುರ ದೇವಿಯ ಸ್ಥಿರ ವಿಗ್ರಹ ಗ್ರಾಮ ಪ್ರವೇಶವಿದೆ. ಸುತ್ತಮುತ್ತಲ ಗ್ರಾಮಗಳ ಗ್ರಾಮ ದೇವತೆಗಳ ಸಮೇತ ರಾಜ ಬೀದಿಯಲ್ಲಿ ಜಾನಪದ ಸಾಂಸ್ಕೃತಿಕ ತಂಡಗಳ ಕಾರ್ಯಕ್ರಮದೊಂದಿಗೆ ಪುರ ಪ್ರವೇಶ ನಡೆಯಲಿದೆ.
ನ. 15ರಂದು ಬ್ರಾಹ್ಮಿ ಲಗ್ನದಲ್ಲಿ ದೇವಿಯ ಸ್ಥಿರ ವಿಗ್ರಹ ಪ್ರತಿಷ್ಠಾಪನೆ, ಬೆಳಿಗ್ಗೆ 6 ಗಂಟೆಗೆ ಕಳಸಾರೋಹಣ, ದೃಷ್ಟಿ ಪೂಜೆ, ರುದ್ರಾಭಿಷೇಕ, ಚಂಡಿಕಾಹೋಮ ನೆರವೇರಲಿದೆ.