<p>ಕೊರಟಗೆರೆ: ತಾಲ್ಲೂಕಿನ ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರಕ ಗ್ರಾಮದಲ್ಲಿ ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿರುವ ‘ಬೆಳದಿಂಗಳು’ ಅಥವಾ ‘ತಿಂಗಳ ಮಾವನ ಪೂಜೆ’ ಸಾಂಪ್ರದಾಯಿಕವಾಗಿ ನೆರವೇರಿತು.</p>.<p>ಒಂಬತ್ತು ದಿನ ನಡೆಯುವ ಈ ಆಚರಣೆಯಲ್ಲಿ ಮೊದಲ ಎಂಟು ದಿನ ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 12ರವರೆಗೆ ಗ್ರಾಮಸ್ಥರು ಒಂದೇ ಸ್ಥಳದಲ್ಲಿ ಸೇರಿ ಬೆಳದಿಂಗಳು ಬರೆಯುವುದು, ಚಂದ್ರನ ಕುರಿತಾದ ಜನಪದ ಹಾಡುಗಳನ್ನು ಹಾಡುವುದು ಮುಂತಾದ ಚಟುವಟಿಕೆ ನಡೆಸಿದರು. ಒಂಬತ್ತನೇ ದಿನ ಮುಖ್ಯ ಪೂಜೆ ನೆರವೇರಿಸಲಾಯಿತು.</p>.<p>ಪೂಜೆ ನಡೆಯುವ ನೆಲವನ್ನು ಸಗಣಿಯಿಂದ ಲೇಪಿಸಿ ಹಸಿರಾಗಿಸಿ, ಅದರ ಮೇಲೆ ರಾಗಿಹಿಟ್ಟಿನಿಂದ ರಂಗೋಲಿಗಳನ್ನು ಬಿಡಿಸಲಾಗಿತ್ತು.</p>.<p>ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಿ ಇಬ್ಬರು ಬಾಲಕರನ್ನು ಮದುವಣಿಗರಾಗಿ ಸಜ್ಜುಗೊಳಿಸಲಾಗಿತ್ತು. ಮದುಮಗನಾಗಿ ಒಬ್ಬ ಬಾಲಕ, ಮದುಮಗಳಾಗಿ ಮತ್ತೊಬ್ಬ ಬಾಲಕನಿಗೆ ಸೀರೆ ಉಡಿಸಿ ಆಭರಣಗಳಿಂದ ಅಲಂಕರಿಸಿ, ಊರ ದೇವಾಲಯದಿಂದ ನಾದಸ್ವರ, ತಮಟೆ, ಡೋಲಿನ ಸದ್ದಿನೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಗ್ರಾಮಸ್ಥರು, ಮಹಿಳೆಯರು, ಪುರುಷರು, ಸಂಬಂಧಿಕರು ಎಲ್ಲರೂ ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.</p>.<p>ಚಂದ್ರನನ್ನು ಹೊಯ್ದ ಸ್ಥಳಕ್ಕೆ ಮದುವಣಿಗರನ್ನು ಕೂರಿಸಿ, ಹೂಮಾಲೆ ಬದಲಾಯಿಸಿ, ಸಾಂಕೇತಿಕವಾಗಿ ತಾಳಿ ಕಟ್ಟಿಸಲಾಗುತ್ತದೆ. ಮದುಮಗನನ್ನು ‘ಸೂರ್ಯ’ ಎಂದು, ಮದುಮಗಳನ್ನು ‘ಚಂದ್ರಮ್ಮ’ ಎಂದು ಕರೆದು, ಈ ವಿಶೇಷ ಲಗ್ನ ನೆರವೇರಿಸಲಾಗುತ್ತದೆ. ಈ ಸಮಯದಲ್ಲಿ ಚಂದ್ರನ ಕುರಿತಾದ ಹಾಡುಗಳು ನಿರಂತರವಾಗಿ ಮೊಳಗುತ್ತಲೇ ಇರುತ್ತವೆ.</p>.<p>ಮಧ್ಯರಾತ್ರಿ ಚಂದ್ರ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸಿಕೊಂಡಾಗ ಪೂಜೆ ನೆರವೇರಿಸಲಾಗುತ್ತದೆ. ಆಚರಣೆಯ ಭಾಗವಾಗಿ ‘ಕಳ್ಳ ಕಳಸ’ ತೆಗೆದುಕೊಂಡು ಹೋಗುವ ಸಂಪ್ರದಾಯವೂ ನಡೆಯುತ್ತದೆ. ನಂತರ ಮದುವಣಿಗರ ಮೆರವಣಿಗೆ ನಡೆಸಿ ಊರ ಮೂಡಣದ ದಿಕ್ಕಿನಲ್ಲಿರುವ ಬಾವಿಯಲ್ಲಿ ಚಂದ್ರಮ್ಮನ ಸಾಗ ಹಾಕಲಾಗುತ್ತದೆ.</p>.<p>ಸ್ಥಳೀಯವಾಗಿ ದೊರೆಯುವ ಕಾಳು, ಸೊಪ್ಪು, ಹಲಸಿನಕಾಯಿ ಪಲ್ಯ, ಪಾಯಸ, ಬೂಂದಿ, ಹೆಸರುಬೇಳೆ, ಚಿತ್ರಾನ್ನ, ಹಪ್ಪಳ, ಅನ್ನ-ಸಾರು ಅಡುಗೆ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಸ್ವತಃ ನಿರ್ವಹಿಸಿ, ಗ್ರಾಮಸ್ಥರಿಗೆ ಊಟ ಬಡಿಸಿ, ಫಲತಾಂಬೂಲ ನೀಡಲಾಗುತ್ತದೆ. ಇಡೀ ಗ್ರಾಮಸ್ಥರು ಒಟ್ಟಾಗಿ ಊಟ ಮಾಡುವುದು ವಿಶೇಷ.</p>.<p>ಊರಿನ ಹಿರಿಯ ಮಹಿಳೆ ಸಿದ್ಧಲಿಂಗಜ್ಜಿ ಮಾರ್ಗದರ್ಶನ ನೀಡಿದರು. ‘ಅಲ್ಲಮಪ್ರಭುವಿನ ವಾರ ಬುಧವಾರ’ ಎಂದು ಶರಣರನ್ನು ಆಹ್ವಾನಿಸುವ ಹಾಡುಗಳು ಗ್ರಾಮದಲ್ಲಿ ಭಕ್ತಿ ಮೂಡಿಸಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260405-17-1089645698</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊರಟಗೆರೆ: ತಾಲ್ಲೂಕಿನ ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರಕ ಗ್ರಾಮದಲ್ಲಿ ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿರುವ ‘ಬೆಳದಿಂಗಳು’ ಅಥವಾ ‘ತಿಂಗಳ ಮಾವನ ಪೂಜೆ’ ಸಾಂಪ್ರದಾಯಿಕವಾಗಿ ನೆರವೇರಿತು.</p>.<p>ಒಂಬತ್ತು ದಿನ ನಡೆಯುವ ಈ ಆಚರಣೆಯಲ್ಲಿ ಮೊದಲ ಎಂಟು ದಿನ ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 12ರವರೆಗೆ ಗ್ರಾಮಸ್ಥರು ಒಂದೇ ಸ್ಥಳದಲ್ಲಿ ಸೇರಿ ಬೆಳದಿಂಗಳು ಬರೆಯುವುದು, ಚಂದ್ರನ ಕುರಿತಾದ ಜನಪದ ಹಾಡುಗಳನ್ನು ಹಾಡುವುದು ಮುಂತಾದ ಚಟುವಟಿಕೆ ನಡೆಸಿದರು. ಒಂಬತ್ತನೇ ದಿನ ಮುಖ್ಯ ಪೂಜೆ ನೆರವೇರಿಸಲಾಯಿತು.</p>.<p>ಪೂಜೆ ನಡೆಯುವ ನೆಲವನ್ನು ಸಗಣಿಯಿಂದ ಲೇಪಿಸಿ ಹಸಿರಾಗಿಸಿ, ಅದರ ಮೇಲೆ ರಾಗಿಹಿಟ್ಟಿನಿಂದ ರಂಗೋಲಿಗಳನ್ನು ಬಿಡಿಸಲಾಗಿತ್ತು.</p>.<p>ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಿ ಇಬ್ಬರು ಬಾಲಕರನ್ನು ಮದುವಣಿಗರಾಗಿ ಸಜ್ಜುಗೊಳಿಸಲಾಗಿತ್ತು. ಮದುಮಗನಾಗಿ ಒಬ್ಬ ಬಾಲಕ, ಮದುಮಗಳಾಗಿ ಮತ್ತೊಬ್ಬ ಬಾಲಕನಿಗೆ ಸೀರೆ ಉಡಿಸಿ ಆಭರಣಗಳಿಂದ ಅಲಂಕರಿಸಿ, ಊರ ದೇವಾಲಯದಿಂದ ನಾದಸ್ವರ, ತಮಟೆ, ಡೋಲಿನ ಸದ್ದಿನೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಗ್ರಾಮಸ್ಥರು, ಮಹಿಳೆಯರು, ಪುರುಷರು, ಸಂಬಂಧಿಕರು ಎಲ್ಲರೂ ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.</p>.<p>ಚಂದ್ರನನ್ನು ಹೊಯ್ದ ಸ್ಥಳಕ್ಕೆ ಮದುವಣಿಗರನ್ನು ಕೂರಿಸಿ, ಹೂಮಾಲೆ ಬದಲಾಯಿಸಿ, ಸಾಂಕೇತಿಕವಾಗಿ ತಾಳಿ ಕಟ್ಟಿಸಲಾಗುತ್ತದೆ. ಮದುಮಗನನ್ನು ‘ಸೂರ್ಯ’ ಎಂದು, ಮದುಮಗಳನ್ನು ‘ಚಂದ್ರಮ್ಮ’ ಎಂದು ಕರೆದು, ಈ ವಿಶೇಷ ಲಗ್ನ ನೆರವೇರಿಸಲಾಗುತ್ತದೆ. ಈ ಸಮಯದಲ್ಲಿ ಚಂದ್ರನ ಕುರಿತಾದ ಹಾಡುಗಳು ನಿರಂತರವಾಗಿ ಮೊಳಗುತ್ತಲೇ ಇರುತ್ತವೆ.</p>.<p>ಮಧ್ಯರಾತ್ರಿ ಚಂದ್ರ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸಿಕೊಂಡಾಗ ಪೂಜೆ ನೆರವೇರಿಸಲಾಗುತ್ತದೆ. ಆಚರಣೆಯ ಭಾಗವಾಗಿ ‘ಕಳ್ಳ ಕಳಸ’ ತೆಗೆದುಕೊಂಡು ಹೋಗುವ ಸಂಪ್ರದಾಯವೂ ನಡೆಯುತ್ತದೆ. ನಂತರ ಮದುವಣಿಗರ ಮೆರವಣಿಗೆ ನಡೆಸಿ ಊರ ಮೂಡಣದ ದಿಕ್ಕಿನಲ್ಲಿರುವ ಬಾವಿಯಲ್ಲಿ ಚಂದ್ರಮ್ಮನ ಸಾಗ ಹಾಕಲಾಗುತ್ತದೆ.</p>.<p>ಸ್ಥಳೀಯವಾಗಿ ದೊರೆಯುವ ಕಾಳು, ಸೊಪ್ಪು, ಹಲಸಿನಕಾಯಿ ಪಲ್ಯ, ಪಾಯಸ, ಬೂಂದಿ, ಹೆಸರುಬೇಳೆ, ಚಿತ್ರಾನ್ನ, ಹಪ್ಪಳ, ಅನ್ನ-ಸಾರು ಅಡುಗೆ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಸ್ವತಃ ನಿರ್ವಹಿಸಿ, ಗ್ರಾಮಸ್ಥರಿಗೆ ಊಟ ಬಡಿಸಿ, ಫಲತಾಂಬೂಲ ನೀಡಲಾಗುತ್ತದೆ. ಇಡೀ ಗ್ರಾಮಸ್ಥರು ಒಟ್ಟಾಗಿ ಊಟ ಮಾಡುವುದು ವಿಶೇಷ.</p>.<p>ಊರಿನ ಹಿರಿಯ ಮಹಿಳೆ ಸಿದ್ಧಲಿಂಗಜ್ಜಿ ಮಾರ್ಗದರ್ಶನ ನೀಡಿದರು. ‘ಅಲ್ಲಮಪ್ರಭುವಿನ ವಾರ ಬುಧವಾರ’ ಎಂದು ಶರಣರನ್ನು ಆಹ್ವಾನಿಸುವ ಹಾಡುಗಳು ಗ್ರಾಮದಲ್ಲಿ ಭಕ್ತಿ ಮೂಡಿಸಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260405-17-1089645698</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>