ಸರತಿಯಲ್ಲಿ ನಿಂತವರಿಗೆ ಮೊದಲು ಬಿಡದೆ, ಅಡ್ಡದಾರಿಯಲ್ಲಿ ದೇವಾಲಯಕ್ಕೆ ಹೋಗುವವರಿಗೆ ಆದ್ಯತೆ ನೀಡುತ್ತಿರುವುದನ್ನು ಕೆಲವು ಭಕ್ತರು ಪ್ರಶ್ನಿಸಿದರು. ಕೂಡಲೇ ಅಲ್ಲಿ ಕಾವಲಿದ್ದ ಪೊಲೀಸರು ಸ್ಥಳಕ್ಕೆ ಬಂದು, ಗ್ರಾಮಲೆಕ್ಕಿಗರನ್ನು ತರಾಟೆಗೆ ತೆಗೆದುಕೊಂಡರು. ನಂತರ ಅವರಿಬ್ಬರೂ ನೇರ ವಸೂಲಿಯನ್ನು ಬಿಟ್ಟು ತೆರಳಿದರು.