ಹೋರಾಟಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಶಾಸಕರಾಗಲು, ಜನಪ್ರತಿನಿಧಿಗಳಾಗುವ ಆಸೆ ಇರುವವರು ಉತ್ತಮ ಸ್ಪಂದನೆಯ ಮೂಲಕ ಜನರ ಹೃದಯ ಗೆಲ್ಲುವ ಕೆಲಸ ಮಾಡಬೇಕು. ಜಿಲ್ಲೆಯಿಂದಲೂ ಪಾದಯಾತ್ರೆಗೆ ಜನರು ಆಗಮಿಸಬೇಕು. ಶಾಸಕರು, ಮಾಜಿ ಶಾಸಕರು, ಮುಖಂಡರು ಹೋರಾಟದಲ್ಲಿ ಭಾಗವಹಿಸುವ ಮೂಲಕ ಇತಿಹಾಸದಲ್ಲಿ ಸೇರಿಕೊಳ್ಳಬೇಕು. ಮೇಕೆದಾಟು ಯೋಜನೆ ಕನ್ನಡಿಗರಾದ ನಮ್ಮೆಲ್ಲರ ಕನಸಾಗಿದೆ ಎಂದು ತಿಳಿಸಿದರು.