ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ವಿಷಯ: ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ ಕೆಎಸ್‌ಆರ್‌ಟಿಸಿ ನಿರ್ವಾಹಕ

Last Updated 2 ಡಿಸೆಂಬರ್ 2019, 12:32 IST
ಅಕ್ಷರ ಗಾತ್ರ

ತುಮಕೂರು: ಚಿಲ್ಲರೆ ಕೇಳಿದ್ದೇ ನೆಪ ಮಾಡಿಕೊಂಡು ಪ್ರಯಾಣಿಕನ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ರಕ್ತ ಸುರಿಯುಂತೆ ಹಲ್ಲೆ ನಡೆಸಿದ್ದಾರೆ.

ಕೊರಟಗೆರೆ ತಾಲ್ಲೂಕು ನಾಗೇನಹಳ್ಳಿ ಸಮೀಪ ಘಟನೆ ನಡೆದಿದೆ. ಪ್ರಯಾಣಿಕ ಕೊರಟಗೆರೆಯಲ್ಲಿ ಹತ್ತಿ ನೆಲಮಂಗಲ ತಾಲ್ಲೂಕು ಮಾದನಾಯಕನಹಳ್ಳಿಗೆ ಟಿಕೆಟ್‌ ಪಡೆದಿದ್ದರು. ಟಿಕೆಟ್‌ ಪಡೆದು ಬಾಕಿ ಹಣವನ್ನು ನೀಡುವಂತೆ ಪ್ರಯಾಣಿಕ ನಿರ್ವಾಹನನನ್ನು ಒತ್ತಾಯಿಸಿದ್ದರು ಎಂದು ತಿಳಿದುಬಂದಿದೆ.

ಮೂರ್ನಾಲ್ಕು ಬಾರಿ ಚಿಲ್ಲರೆ ಕೊಡುವಂತೆ ಕೇಳಿದ್ದು, ಇದರಿಂದ ಕುಪಿತಗೊಂಡ ಕಂಡಕ್ಟರ್‌ ಟಿಕೆಟ್‌ ನೀಡುವ ಯಂತ್ರದಿಂದ ಪ್ರಯಾಣಿಕನ ತೆಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಆಗ ಪ್ರಯಾಣಿಕನ ತಲೆಯಿಂದ ರಕ್ತ ಸುರಿದಿದೆ. ಸಹ ಪ್ರಯಾಣಿಕರು ಆಕ್ರೋಶಗೊಂಡು ನಿರ್ವಾಹಕನನ್ನು ಕೆಳಗಿಳಿಸಿ ಥಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT