ತಹಶೀಲ್ದಾರ್ ವಿಶ್ವನಾಥ್ ಮಾತನಾಡಿ, ನಂಜಮ್ಮ ಮತ್ತು ಕೆಂಪಮ್ಮ ಅವರಿಗೆ ಸ್ಥಳದದಲ್ಲೇ ಆಧಾರ್ ಮತ್ತು ಪಡಿತರ ಚೀಟಿ ವಿತರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಸ್ಥಗಿತವಾಗಿರುವ ಪೆನ್ಶನ್ ನೀಡುವುದರ ಜತೆಗೆ ವೈಯುಕ್ತಿಕವಾಗಿ ಸೀರೆ ಮತ್ತು ಹೊದಿಕೆ, ಬಟ್ಟೆಗಳನ್ನು ನೀಡುವುದಾಗಿ ತಿಳಿಸಿದರು. ತಹಶೀಲ್ದಾರ್ರೊಂದಿಗೆ ಕೈಜೋಡಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಯಣ್ಣ, ಆಹಾರ ಸಾಮಗ್ರಿ, ದಿನನಿತ್ಯದ ಅಗತ್ಯ ವಸ್ತುಗಳನ್ನು ನೀಡಿದರು. ಪುರಸಭೆ ಮುಖ್ಯಾಧಿಕಾರಿ ರಮೇಶ್ ಗಾಲಿ ಕುರ್ಚಿ ನೀಡಿದರು.