‘ಕಾಲು, ಬಾಯಿ ಹಾಗೂ ಮುಖದ ಭಾಗಗಳಲ್ಲಿ ಗಾಯಗಳಾಗಿದ್ದು, ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ್ ಚಿಕಿತ್ಸೆ ನೀಡಿದ್ದಾರೆ. ನಂಜು ಹಾಗೂ ನೋವು ನಿವಾರಕ ಚುಚ್ಚುಮದ್ದು ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಬೇಟೆ ಆಡಿಯೇ ತಿನ್ನುವ ಸಹಜ ಸ್ವಭಾವ ತೋರಿದ ಚಿರತೆಯ ಮರಿ ಸ್ವಲ್ಪವೇ ಮಾಂಸದ ತುಣುಕನ್ನು ಸೇವಿಸಿತು’ ಎಂದು ವಲಯ ಅರಣ್ಯಾಧಿಕಾರಿ ಸಿ.ರವಿ ‘ಪ್ರಜಾವಾಣಿ’ ಗೆ ತಿಳಿಸಿದರು.