ಚಂದು ತಾಯಿ ದೋಡ್ಡೀರಮ್ಮನ ಜತೆ ಗ್ರಾಮದ ಕಟ್ಟೆ ಬಳಿ ಬಟ್ಟೆ ತೊಳೆಯಲು ತೆರಳಿದ್ದ.ದೋಡ್ಡೀರಮ್ಮ ಬಟ್ಟೆ ತೊಳೆಯುತ್ತಿರುವಾಗಲೇ ಪಕ್ಕದಲ್ಲಿದ್ದ ಕಾಡಿನಿಂದ ಬಂದ ಚಿರತೆ ಬಾಲಕನ ಮೇಲೆ ದಾಳಿ ಮಾಡಿ ಎಳೆದೊಯ್ದಿದೆ. ಮಗುವಿನ ಚೀರಾಟ ಕೇಳಿ ತಾಯಿ ಮತ್ತು ಸ್ಥಳದಲ್ಲಿದ್ದ ಶಿವಣ್ಣ ಹಿಂಬಾಲಿಸಿದಾಗ ಸ್ವಲ್ಪ ದೂರದಲ್ಲಿದ್ದ ಹೊಲದಲ್ಲಿ ಚಿರತೆ ಮಗುವನ್ನು ಬಿಟ್ಟು ಹೋಗಿದೆ. ತಾಯಿ ಹೋಗಿ ನೋಡುವ ಸಮಯದಲ್ಲಿ ಮಗು ಮೃತಪಟ್ಟಿದೆ.